Advertisement

ದಿವ್ಯಾಂಗರಿಗೆ ರಿಯಾಯಿತಿ 

12:30 AM Feb 01, 2019 | Team Udayavani |

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ರಾಜ್ಯದ ದಿವ್ಯಾಂಗರಿಗೆ ಸಿಹಿ ಸುದ್ದಿ ನೀಡಿದೆ.

Advertisement

ರಾಜ್ಯದ ಪ್ರವಾಸಿತಾಣಗಳಲ್ಲಿ ದಿವ್ಯಾಂಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಗಮದ ವತಿಯಿಂದ ನಡೆಯುವ ಮಯೂರ ಹೋಟೆಲ್‌ಗಳಲ್ಲಿ ತಂಗುವ ದಿವ್ಯಾಂಗರಿಗೆ ಶೇ.50ರಷ್ಟು ದರ ವಿನಾಯಿತಿ ನೀಡುವ ಯೋಜನೆ ಘೋಷಿಸಿದೆ.

ಮಯೂರ ಹೋಟೆಲ್‌ ಕೊಠಡಿಗಳ ದರದಲ್ಲಿ ಶೇ.50ರಷ್ಟು ಹಾಗೂ ಉಪಾಹಾರ ಗೃಹದಲ್ಲಿ ತಿಂಡಿ, ಊಟದ ದರದಲ್ಲಿ ಶೇ.25ರಷ್ಟು ದರ ವಿನಾಯಿತಿ ನೀಡಲಿದೆ. ಒಬ್ಬ ದಿವ್ಯಾಂಗರಿಗೆ ಒಂದು ಕೊಠಡಿ ನೀಡಲಿದ್ದು, ಮತ್ತೂಬ್ಬರು ಅವರ ಜತೆ ತಂಗಲು ಅವಕಾಶವಿದೆ. ಆರಂಭಿಕವಾಗಿ ಹಂಪಿಯ ಮಯೂರ ಭುವನೇಶ್ವರಿಯಲ್ಲಿ ವೈದ್ಯರ ಸೌಲಭ್ಯ ಕಲ್ಪಿಸಲಾಗಿದೆ.

ಈ ಯೋಜನೆ ಫೆ.1ರಿಂದ ಜಾರಿಗೆ ಬರಲಿದೆ. ದಿವ್ಯಾಂಗರು ಕೆಎಸ್‌ಟಿಡಿಸಿಯ ಬುಕ್ಕಿಂಗ್‌ ಕೇಂದ್ರ 080- 4334-4334 ದೂರವಾಣಿ ಮೂಲಕ ಕೊಠಡಿ ಬುಕ್‌ ಮಾಡಿಕೊಳ್ಳಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next