Advertisement

ರಾಜ್ಯ ಅಂತರ್‌ ಜಿಲ್ಲಾ ಕ್ರೀಡಾಕೂಟ: ಬೆಂಗಳೂರು ತಂಡ ಸಮಗ್ರ ಚಾಂಪಿಯನ್‌

11:30 PM Aug 25, 2019 | Sriram |

ಉಡುಪಿ: ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ನೇತೃತ್ವದಲ್ಲಿ, ನಿಟ್ಟೆ ಎಜುಕೇಶನ್‌ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ಹಾಗೂ ಮಾಹೆ ಸಹಭಾಗಿತ್ವದಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್‌ ಜಿಲ್ಲಾ ಕಿರಿಯರ ಕ್ರೀಡಾಕೂಟದ ಸಮಗ್ರ ತಂಡ ಪ್ರಶಸ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗೆದ್ದುಕೊಂಡಿದೆ.

Advertisement

14, 16, 18 ಮತ್ತು 20ರ ಬಾಲಕ, ಬಾಲಕಿಯರ ವಿಭಾಗದಲ್ಲಿ ಎಲ್ಲ ತಂಡ ಪ್ರಶಸ್ತಿಗಳನ್ನೆಲ್ಲ ಬೆಂಗಳೂರು ನಗರ ತಂಡವೇ ಬಾಚಿಕೊಂಡಿತು. ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 20ರ ವಯೋಮಿತಿ ವಿಭಾಗದಲ್ಲಿ ಉಡುಪಿಯ ಅಬಿನ್‌ ದೇವಾಡಿಗ ಹಾಗೂ ಬಾಲಕರ 16ರ ವಯೋಮಿತಿ ವಿಭಾಗದಲ್ಲಿ ದ.ಕ. ಜಿಲ್ಲೆಯ ನೀಲ್‌ ಆರ್‌. ಕುಂದರ್‌ ಚಾಂಪಿಯನ್‌ಶಿಪ್‌ ಗೆದ್ದುಕೊಂಡರು. ಬೆಂಗಳೂರು ನಗರ ಜಿಲ್ಲಾ ತಂಡ 364 ಅಂಕಗಳೊಂದಿಗೆ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿತು.

ಪ್ರಶಸ್ತಿ ಪ್ರದಾನ
ನಿಟ್ಟೆ ಎನ್‌ಎಂಎಎಂಐಟಿ ಪ್ರಾಂಶು ಪಾಲ ಡಾ| ನಿರಂಜನ್‌ ಎನ್‌.ಚಿಪೂÉಣ್‌ಕರ್‌ ಪ್ರಶಸ್ತಿ ಪ್ರದಾನ ಮಾಡಿದರು. ಸಂಘಟನಾ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ಕೆ. ರಘುಪತಿ ಭಟ್‌, ಉಡುಪಿ-ದ.ಕ. ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಕಾರ್ಕಳ ಪದ್ಮಗೋಪಾಲ ಎಜು. ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ್‌ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿ‌ನಿ ಅಕ್ಕುಂಜೆ, ಕೆಎಎ ಹಿರಿಯ ಉಪಾಧ್ಯಕ್ಷ ಎಚ್‌.ಟಿ.ಮಹಾದೇವ್‌, ಗೌರವ ಕಾರ್ಯದರ್ಶಿ ರಾಜವೇಲು, ಯುಡಿಎಎಎ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ರಘುರಾಮ್‌ ನಾಯಕ್‌ ಎ., ಕಾರ್ಯದರ್ಶಿ ದಿನೇಶ್‌ ಕುಮಾರ್‌ ಎ., ಖಜಾಂಚಿ ಡಾ| ದೀಪಕ್‌ ರಾಮ್‌ ಬಾೖರಿ, ಕ್ರೀಡಾಕೂಟ ಆಯೋಜನಾ ಸಮಿತಿಯ ಕಾರ್ಯದರ್ಶಿ ಮಹೇಶ್‌ ಠಾಕೂರ್‌, ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಕೆಎಎ ಉಪಾಧ್ಯಕ್ಷ ಡಾ| ಎಚ್‌.ವಿ.ಕೆಂಪರಾಜ್‌, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next