Advertisement

ರಾಜ್ಯ ಸರಕಾರದ ಪ್ರಕಟನೆಗಳು ಚಂದಾದಾರಿಕೆ ಅಭಿಯಾನ ಆರಂಭ

12:13 AM Jul 04, 2019 | Team Udayavani |

ಕಾಸರಗೋಡು: ರಾಜ್ಯ ಸರಕಾರದ ಪ್ರಕಟನೆಗಳನ್ನು ಸಾರ್ವಜನಿಕರಿಗೆ, ಸರಕಾರಿ ಸಿಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ತಲಪಿಸುವ ನಿಟ್ಟಿನಲ್ಲಿ ಚಂದಾದಾರಿಕೆ ಅಭಿಯಾನ ಜಿಲ್ಲೆಯಲ್ಲಿ ಆರಂಭಗೊಂಡಿತು.

Advertisement

ಕೇರಳ ಕಾಲಿಂಗ್‌ ಮತ್ತು ಜನಪಥಂ ಎಂಬ ಮಾಸಪತ್ರಿಕೆಗಳ ಚಂದಾದಾರಿಕೆ ಈ ಮೂಲಕ ನಡೆಯುತ್ತಿದೆ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಈ ಸಂಬಂಧ ಜರಗಿದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್‌ ಎಂ. ಅವರು ಪ್ರಕಟನೆಗಳನ್ನು ಬಶೀರ್‌ ಅವರಿಗೆ ಹಸ್ತಾಂತರಿಸಿದರು.

ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಚಂದಾದಾರಿಕೆ ವರ್ಷಕ್ಕೆ ತಲಾ 120 ರೂ. ಆಗಿದ್ದು, ಉಳಿದ ಪತ್ರಿಕೆಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆಯಾಗಿದೆ. ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಸಿಬಂದಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next