Advertisement

ಮಂಗಾನವರಗೆ ರಾಜ್ಯ ಪ್ರಶಸ್ತಿ

10:49 AM Jan 07, 2019 | |

ವಿಜಯಪುರ: ಶಿಕ್ಷಕ ರಾಗಿದ್ದುಕೊಂಡು ಕೃಷಿಯಲ್ಲಿ ಆಮೂಲ್ಯ ಸಾಧನೆ ಮಾಡಿರುವ ಶಿವಾನಂದ ಮಂಗಾನವರಗೆ ಅದರ್ಶ
ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬಸವನಬಾಗೇವಾಡಿ ತಾಲೂಕಿನ ಯಂಭತ್ನಾಳ ಗ್ರಾಮದ ಶಿವಾನಂದ ಮಂಗಾನವರ ಕೃಷಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದನ್ನು ಪರಿಗಣಿಸಿ ಬೆಂಗಳೂರಿನಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಡೆದ ರೈತರ ದಿನಾಚರಣೆ ಹಾಗೂ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಪದ್ಮಭೂಷಣ ಪ್ರಶಸ್ತಿ ವಿಜೇತ ಖ್ಯಾತ ಕೃಷಿ ವಿಜ್ಞಾನಿ ಡಾ| ಎಂ.ಮಹಾದೇವಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಬೆಳೆ ಆಯೋಗದ ಅಧ್ಯಕ್ಷ ಪ್ರಕಾಶ ಕಮ್ಮರಕಡಿ, ಕೃಷಿ ಇಲಾಖೆ ರಾಜ್ಯ ನಿರ್ದೇಶಕ ಬಿ.ವೈ. ಶ್ರೀನಿವಾಸ, ಕೃಷಿ ತಂತ್ರಜ್ಞರ ಸಂಸ್ಥೆ ರಾಜ್ಯಾಧ್ಯಕ್ಷ ಡಾ| ಎಂ.ಮಲ್ಲಪ್ಪ, ಉಪಾಧ್ಯಕ್ಷ ಡಾ| ಬಿ.ಈಶ್ವರಪ್ಪ, ಕಾರ್ಯದರ್ಶಿ ಕೆ. ಕೃಷ್ಣಪ್ಪ, ಕೃಷಿ ಸಚಿವರ ಸಲಹೆಗಾರ ಡಾ| ಎ.ಬಿ. ಪಾಟೀಲ ಸೇರಿದಂತೆ ಇತರರು ಭಾಗವಹಿಸಿದ್ದರು. 

ಸದರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜಯಪುರ ಘಟಕದ ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಡಾ| ಆರ್‌.ಬಿ. ಬೆಳ್ಳಿ
ಹಾಗೂ ಬಿ.ಬಿ. ಬಿರಾದಾರ, ಡಾ| ಅಶೋಕ ಸಜ್ಜನ ಹಾಜರಿದ್ದು ಶಿವಾನಂದ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲೆ ಪ್ರಗತಿಪರ ರೈತರು ಕೃಷಿ ತಂತ್ರಜ್ಞರು, ಸಂಶೋಧಕರು ಹಾಗೂ ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next