Advertisement

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

03:02 PM Nov 03, 2019 | Suhan S |

ಹುಮನಾಬಾದ: ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕಾಮಗಾರಿ ಕೈಗೊಂಡ ನಂತರ ಕಳಪೆ ಆಗಿದೆ ಎಂದು ದೂರುವ ಬದಲಿಗೆ ಸಾರ್ವಜನಿಕರು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಡದಂತೆ ಮೆನ್ನೆಚ್ಚರಿಕೆ ವಹಿಸಿ, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಸಲಹೆ ನೀಡಿದರು.

Advertisement

ಹುಮನಾಬಾದ- ಮಾಣಿಕನಗರ- ಘೋಡವಾಡಿ ಮಾರ್ಗದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ1.50 ಕಿ.ಮೀ. ಜಂಕ್ಷನ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದ ಅನುದಾನವೇನು ವಿಧಾನಸೌಧದಲ್ಲಿ ಪ್ರಿಂಟ್‌ ಆಗುವುದಿಲ್ಲ. ಪ್ರತಿಯೊಬ್ಬರಿಂದ ಸಂಗ್ರಹಿಸಲಾಗುವುವ ತೆರಿಗೆ ಹಣವನ್ನೇ ಸರ್ಕಾರ ಅಭಿವೃದ್ಧಿಗಾಗಿ ಅನುದಾನ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವ ಕಾರಣ ಬಹುತೇಕ ಕಾಮಗಾರಿಗಳು ಪೂರ್ಣಾವಧಿ ಸೇವೆ ಒದಗಿಸುವ ಮುನ್ನವೇ ಹಾಳಾಗುತ್ತವೆ. ಇಂಥದಕ್ಕೆ ಸಾರ್ವಜನಿಕರು ಅವಕಾಶ ಕಲ್ಪಿಸಬಾರದು ಎಂದು ಸಲಹೆ ನೀಡಿದರು.  ಗುಣಮಟ್ಟ ವಿಷಯದಲ್ಲಿ ಯಾವುದೇ ಮುಲಾಜಿಲ್ಲ. ಗುತ್ತಿಗೆದಾರ ಯಾರಾಗಿದ್ದರೂ ಸರಿ, ಕಳಪೆಯಾದರೆ ಬಿಲ್‌ ತಡೆಹಿಡಿಯಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ|ಚಂದ್ರಶೇಖರ ಬಿ.ಪಾಟೀಲ, ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಸದಸ್ಯ ಪ್ರಕಾಶ ಕಾಳಮದರಗಿ, ಮಾಣಿಕನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಪೊಲೀಸ್‌ ಪಾಟೀಲ, ಅಣ್ಣಾರಾವ್‌ ಪಾಟೀಲ, ದತ್ತಕುಮಾರ ಚಿದ್ರಿ, ಓಂಕಾರ ತುಂಬಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಹ್ಮದ್‌ ಮೈನೋದ್ದಿನ್‌ ಅಪ್ಸರಮಿಯ್ಯ, ರಾಜಪ್ಪ ಇಟಗಿ, ಎಸ್‌.ಡಿ.ವಾಗ್ಮಾರೆ, ಈಶ್ವರ ಬಿ.ಕಲಬುರ್ಗಿ, ವಾಹೇದ್‌ ಬೇಗ್‌, ಮಲ್ಲಿಕಾರ್ಜುನ ಮಾಳಶೆಟ್ಟಿ, ಸಚ್ಚಿನ ಘವಾಳ್ಕರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next