Advertisement

ಯಾತ್ರಿ ನಿವಾಸ ನಿರ್ಮಾಣಕ್ಕೆ ಚಾಲನೆ

03:37 PM Oct 22, 2019 | Suhan S |

ಗೊರೇಬಾಳ: ಸಿಂಧನೂರು ತಾಲೂಕಿನ 3ನೇ ಮೈಲ್‌ ಕ್ಯಾಂಪ್‌ನ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ನಿರ್ಮಾಣಕ್ಕೆ ಶಾಸಕ ವೆಂಕಟರಾವ್‌ ನಾಡಗೌಡ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಜೊತೆಗೆ ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು. ಕೆಆರ್‌ ಐಡಿಎಲ್‌ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊಂದಿದೆ. ಮಠದ ಅಭಿವೃದ್ದಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ನೀಡಲಾಗಿದೆ ಎಂದರು.

ಶ್ರೀಮಠದ ಸೋಮನಾಥ ಶಿವಾಚಾರ್ಯರು, ಕೆಪಿಸಿಸಿಕಾರ್ಯದರ್ಶಿ ಕೆ.ಕರಿಯಪ್ಪ, ನಗರಸಭೆ ಸದಸ್ಯ ಶರಣಪ್ಪ, ಭೂ ದಾನಿ ಸಂಗಯ್ಯ ಸ್ವಾಮಿ ಸರಗಣಾದಿಶ್ವರಮಠ, ಪಂಪಯ್ಯಸ್ವಾಮಿ ರ್ಯಾವಿಹಾಳ, ಚಂದ್ರಶೇಖರ ಹಿರೇಮಠ, ಎಂ.ಭಾಸ್ಕರ, ಅಮರೇಶ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next