Advertisement

ಬಾಂದಾರ ನಿರ್ಮಾಣಕ್ಕೆ ಚಾಲನೆ

01:03 PM Feb 23, 2020 | Suhan S |

ರಾಯಬಾಗ: ತಾಲೂಕಿನ ಚಿಂಚಲಿ ಪಟ್ಟಣದ ಟೊಣ್ಣೆ ತೋಟದ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ವೆಚ್ಚದ ಸೇತುವೆ ಸಹಿತ ಬಾಂದಾರ ನಿರ್ಮಾಣಕ್ಕೆ ಶನಿವಾರ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಟೊಣ್ಣೆ ತೋಟದ ನಿವಾಸಿಗಳ ಬಹು ದಿನಗಳ ಬೇಡಿಕೆ ಇದಾಗಿತ್ತು. ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ ಸಂಚರಿಸಲು ಬಹಳ ಅನುಕೂಲವಾಗುತ್ತದೆ ಎಂದು ಹೇಳಿದರು.

Advertisement

ಪಟ್ಟಣ ಪಂಚಾಯ್ತಿ ಸದಸ್ಯ ಅಂಕುಶ ಜಾಧವ, ಸದಾಶಿವ ಘೋರ್ಪಡೆ, ರಮೇಶ ಹಾರೂಗೇರಿ, ಮಲ್ಲು ಕಮತೆ, ಸುಭಾಷ ಕೋರೆ, ಗೋಪಾಲ ಟೊಣ್ಣೆ, ಮಾಯಪ್ಪ ಟೊಣ್ಣೆ, ಕಲ್ಲಪ್ಪ ಟೊಣ್ಣೆ, ಸುಭಾಷ ಹಾರೂಗೇರಿ, ದಿಲೀಪ ಹಾರೂಗೇರಿ, ಜಗದೀಶ ಹಾರೂಗೇರಿ, ವಿವೇಕಾನಂದ ಯಡ್ರಾಂವ, ವಿಠಲ ಬಾಣುಸೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಎಸ್‌.ಎನ್‌.ಚೌಧರಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next