Advertisement

ಪುನರಾರಂಭ ಶುರು

10:27 AM Aug 21, 2017 | Team Udayavani |

“ಪುನರಾರಂಭ’ವೆಂಬ ಚಿತ್ರವೊಂದು ಬರುತ್ತಿದೆ ಎಂಬ ಸುದ್ದಿಯನ್ನು ನೀವು ಈ ಹಿಂದೆ ಓದಿರುತ್ತೀರಿ. ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತ ನಡೆದಿದೆ. ಹಿರಿಯ ನಿರ್ಮಾಪಕ ಎಸ್‌.ವಿ. ಬಾಬು ಹಾಗೂ ಶಾಸಕ ಅಶ್ವತ್ಥ್ ನಾರಾಯಣ ಅವರು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು. ಕಳೆದ ಹಲವು ವರ್ಷಗಳಿಂದಲೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿದ್ದ ಡಾ. ವಿಜಯ್‌ಕುಮಾರ್‌ ಈ ಚಿತ್ರದ ಮೂಲಕ ಮತ್ತೆ ನಟನೆ ಇಳಿದಿದ್ದಾರೆ.

Advertisement

ಈ ಚಿತ್ರದಲ್ಲಿ ಅವರು ನಾಯಕರಾಗಿ ನಟಿಸುವ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಕೂಡಾ ಅವರದೇ. ಈ ಚಿತ್ರಕ್ಕೆ ಗಣೇಶ್‌ ರಾವ್‌ ಅವರ ಸಹ ನಿರ್ದೇಶನವಿದೆ. ವಿದೇಶದಲ್ಲಿ ವಿಜಯ್‌ಕುಮಾರ್‌ ಅವರಿಗೆ ಈ ಕಥೆ ಇಷ್ಟವಾಗಿ ಈ ಸಿನಿಮಾ ಮಾಡುತ್ತಿದ್ದಾರಂತೆ. ಕನಸಿನ ಹಿಂದೆ ಬಿದ್ದ ವ್ಯಕ್ತಿ ಮುಂದೆ ಹೇಗೆಲ್ಲಾ ಸಮಸ್ಯೆ ಎದುರಿಸುತ್ತಾನೆಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ.

ವ್ಯವಹಾರದಿಂದ ನಷ್ಟ ಅನುಭವಿಸಿ ಅನೇಕ ಸಮಸ್ಯೆಗಳನ್ನು ಎದುರಿಸಿದ ನಾಯಕನ ಜೀವನದಲ್ಲಿ ಪುನಃ ಅದೃಷ್ಟದ ಬಾಗಿಲು ತೆರೆಯುತ್ತದೆ. ಅನಾಮಧೇಯ ಹಣ ಸಿಕ್ಕ ನಂತರ ಅದರಿಂದ ಏನೆಲ್ಲಾ ಆಗುತ್ತದೆ ಎಂಬ ಅಂಶ ಚಿತ್ರದಲ್ಲಿ ಪ್ರಮುಖವಾಗಿದೆಯಂತೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮಡಿಕೇರಿಯಲ್ಲಿ ನಡೆಯಲಿದ್ದು, ಈ ಹಿಂದೆ ಯಾವುದೇ ಸಿನಿಮಾ ಚಿತ್ರೀಕರಣವಾಗದಂತಹ ಸುಂದರ ತಾಣಗಳು “ಪುನರಾರಂಭ’ ತಂಡಕ್ಕೆ ಸಿಕ್ಕಿವೆಯಂತೆ. “ಇದೊಂದು ಹೊಸ ಬಗೆಯ ಕಥೆ.

ಅದಕ್ಕಿಂತ ಹೆಚ್ಚಾಗಿ ಇಂದಿನ ಟ್ರೆಂಡ್‌ಗೆ ತಕ್ಕುದಾಗಿದೆ. ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಕಥೆ ಮಾಡಿದ್ದೇವೆ’ ಎನ್ನುವುದು ವಿಜಯ್‌ಕುಮಾರ್‌ ಅವರ ಮಾತು. ಚಿತ್ರದಲ್ಲಿ “ಮಿಸ್‌ ಕರ್ನಾಟಕ’ ಆಗಿದ್ದ ಐಶ್ವರ್ಯಾ ದಿನೇಶ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೋಭರಾಜ್‌, ಶಂಕರ್‌ ಅಶ್ವಥ್‌, ಗಣೇಶ್‌ರಾವ್‌, ರಿಚರ್ಡ್‌ ಲೂಯಿಸ್‌, ಲಯೇಂದ್ರ, ವೈಷ್ಣವಿ, ಶ್ವೇತಾಗೌಡ, ಪ್ರೀತು ಪೂಜಾ, ಸುರೇಖಾ, ಮಾಸ್ಟರ್‌ ಸಂಜಿತ್‌ ಸೇರಿದಂತೆ ಅನೇಕರು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next