Advertisement

ವಿಶ್ವ ಸ್ತನ್ಯಪಾನ ಸಪ್ತಾಹ ಆರಂಭ

09:49 PM Aug 02, 2019 | Sriram |

ಕಾಸರಗೋಡು: ವಿಶ್ವ ಎದೆಹಾಲುಣಿಸುವ ಸಪ್ತಾಹ ಕಾರ್ಯಕ್ರಮ ಜಿಲ್ಲೆ ಯಲ್ಲಿ ಆರಂಭಗೊಂಡಿತು.

Advertisement

ಜಿಲ್ಲಾ ಐ.ಸಿ.ಡಿ.ಎಸ್‌. ಪ್ರೋಗ್ರಾಂ ಕಚೇರಿಯ ನೇತೃತ್ವದಲ್ಲಿ ಸಪ್ತಾಹ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಸಹಿ ಅಭಿಯಾನ ಜರಗಿತು. ಹೆತ್ತವರನ್ನು ಜಾಗೃತಿಗೊಳಿಸುವ ಮತ್ತು ಎದೆಹಾಲುಣಿಸುವಿಕೆಯನ್ನು ಪ್ರೋತ್ಸಾಹಿಸುವ ಸಂದೇಶದೊಂದಿಗೆ ಈ ಅಭಿಯಾನ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭಕ್ಕೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌ ಚಾಲನೆ ನೀಡಿದರು.ಐ.ಸಿ.ಡಿಎಸ್‌. ಪ್ರೋಗ್ರಾಂ ಆಫೀಸರ್‌ ಕವಿತಾ ರಾಣಿ ರಂಜಿತ್‌,ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್‌,ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಜು ಪಿ. ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಮಾರಂಭದ ಅಂಗವಾಗಿ ವಿಚಾರಸಂಕಿರಣ ಮತ್ತು ಜನಜಾಗೃತಿ ಕಾರ್ಯಕ್ರಮ ಕಾಂಞಂಗಾಡ್‌ ಮೀನಾಪೀಸ್‌ ಪುರಭವನದಲ್ಲಿ ನಡೆಯಿತು. ಜಿಲ್ಲಾ ಐ.ಸಿ.ಡಿ.ಎಸ್‌. ಪ್ರೋಗ್ರಾಂ ಆಫೀಸ್‌, ಆರೋಗ್ಯ ಇಲಾಖೆ, ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಪೀಡಿಯಾಟ್ರಿಕ್ಸ್‌ ಜಂಟಿ ವತಿಯಿಂದ ಈ ಕಾರ್ಯಕ್ರಮ ಜರಗಿತು. ಕಾಂಞಂಗಾಡ್‌ ನಗರಸಭೆ ಅಧ್ಯಕ್ಷ ವಿ.ವಿ. ರಮೇಶನ್‌ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್‌ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಪಿ. ದಿನೇಶ್‌ ಕುಮಾರ್‌ ಸಪ್ತಾಹದ ಸಂದೇಶ ಸಾರಿದರು.

Advertisement

Udayavani is now on Telegram. Click here to join our channel and stay updated with the latest news.

Next