Advertisement

ಮುಜಫ‌ರಪುರ ದೇಗುಲದಲ್ಲಿ ಕಾಲ್ತುಳಿತ : 15 ಕನ್ವರಿಯಾಗಳಿಗೆ ಗಾಯ

11:21 AM Aug 13, 2018 | Team Udayavani |

ಮುಜಫ‌ರಪುರ : ಇಲ್ಲಿನ ಗರೀಬ್‌ ನಾಥ್‌ ದೇವಾಲಯದಲ್ಲಿ ನೂಕುನುಗ್ಗಲಿನಿಂದ ಸಂಭವಿಸಿದ ಕಾಲತುಳಿತಕ್ಕೆ ಗುರಿಯಾಗಿ ಕನಿಷ್ಠ 15 ಕನ್ವರಿಯಾಗಳು ಗಾಯಗೊಂಡ ಘಟನೆ ಇಂದು ಸೋಮವಾರ ಬೆಳಗ್ಗೆ ನಡೆದಿದೆ. 

Advertisement

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ದಿಲ್ಲಿಯಲ್ಲಿ ಈಚೆಗೆ ಕನ್ವರಿಯಾಗಳಿಂದ ನಡೆದಿದ್ದ ಹಿಂಸೆಗೆ ಸುಪ್ರೀಂ ಕೋರ್ಟ್‌ ಗಂಭೀರವಾಗಿತ್ತು. ಹಿಂಸೆ ಯಾವುದೇ ಧರ್ಮದವರಿಂದ ನಡೆದರೂ ಪೊಲೀಸ್‌ ವ್ಯವಸ್ಥೆ ಅದನ್ನು ನಿಯತ್ರಿಸಲೇ ಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. 

ಹಾಲಿ ಪ್ರಕರಣದಲ್ಲಿ ದೇಗುಲದೊಳಗೆ ನಡೆದಿರುವ ಕಾಲ್ತುಳಿತ ದುರ್ಘ‌ಟನೆಗೆ ಮೂಲ ಕಾರಣ ಏನೆಂಬುದು ಖಚಿತವಾಗಿ ತಿಳಿದು ಬಂದಿಲ್ಲ. ದೇವಳದೊಳಗಿನ ಭಕ್ತರ ನೂಕುನುಗ್ಗಲೇ ಕಾರಣವಿರಬಹುದಾದ ವ್ಯವಸ್ಥೆಯಲ್ಲಿನ ವೈಫ‌ಲ್ಯವೇ ಇದಕ್ಕೆ ಕಾರಣವೆಂದು ತಿಳಿಯಲಾಗಿದೆ. 

ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲತುಳಿತಕ್ಕೆ ಗುರಿಯಾದ ಕನ್ವರಿಯಾಗಳಿಗೆ ಚಿಕಿತ್ಸೆ ನೀಡಲಾಗತ್ತಿದೆ ಎಂದವರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next