Advertisement

ಬಿಹಾರ; ಕಾರ್ತಿಕ್ ಪೂಜಾ ಆಚರಣೆ, ಕಾಲ್ತುಳಿತಕ್ಕೆ 4 ಮಂದಿ ಬಲಿ

10:53 AM Nov 04, 2017 | Sharanya Alva |

ಪಾಟ್ನ:ಕಾರ್ತಿಕ್ ಪೂಜಾ ಆಚರಣೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಸುಮಾರು 4ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಕಾರ್ತಿಕ್ ಪೂರ್ಣಿಮಾ ಆಚರಣೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸಿಮಾರಿಯಾ ಘಾಟ್ ನಲ್ಲಿ ಸ್ನಾನ ಮಾಡಲು ಒಟ್ಟು ಸೇರಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಸುಳ್ಳು ಸುದ್ದಿಯಿಂದಾಗಿ ಈ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ವರದಿ ಪ್ರಕಾರ ಘಾಟ್ ನಲ್ಲಿ ಸೇರಿದ್ದ ಅತಿಯಾದ ಜನಜಂಗುಳಿಯಿಂದಾಗಿಯೇ ಕಾಲ್ತುಳಿತ ಸಂಭವಿಸಲು ಕಾರಣ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next