Advertisement
ಈ ಸಂಬಂಧ ಅವರು ಜಿಲ್ಲಾಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ಆದೇಶವನ್ನಾಧರಿಸಿ ಸರ್ಕಾರ ಎಂಡೋಸಲ್ಪಾನ್ ಬಾಧಿತರಿಗಾಗಿ ಜಿಲ್ಲೆಯ ಆರು ತಾಲೂಕುಗಳಲ್ಲಿ ವಿಶೇಷವಾಗಿ ಸಿದ್ದಪಡಿಸಲಾದ 4 ಸಂಚಾರಿ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಚ್ -2018 ರಿಂದ ಈ ಸೇವೆ ಆರಂಭಿಸಲಾಗಿದ್ದು ಎಂಡೋಸಲ್ಪಾನ್ ಪೀಡಿತರು ಹಾಗೂ ಅವರ ಕುಟುಂಬ ಸದಸ್ಯರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಆರೋಗ್ಯ ಸೇವೆ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತೊಂದರೆ ಆಗುತ್ತಿರುವುದರಿಂದ ಸ್ಥಳಿಯವಾಗಿಯೇ ಉತ್ತಮ ಸೇವೆ ಲಭ್ಯವಾಗಬೇಕೆಂಬ ಕಾರಣದಿಂದ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ನಾಲ್ಕು ಸಂಚಾರಿ ಆರೋಗ್ಯ ಘಟಕಗಳನ್ನು ರೂಪಿಸಿ ಎಂಡೋಬಾಧಿತರ ಸೇವೆಗೆ ನಿಯೋಜಿಸಿದೆ.
Related Articles
Advertisement
ಇದನ್ನೂ ಓದಿ :ರಾಮಮಂದಿರಕ್ಕೆ ಅರ್ಪಿಸಲಿರುವ ಬೆಳ್ಳಿ ಇಟ್ಟಿಗೆ ಅ.6ರಂದು ದಾವಣಗೆರೆಗೆ ಆಗಮನ
ಆದರೆ ಕಳೆದ 7 ತಿಂಗಳಿಂದ ನಿರ್ವಹಣಾ ವೆಚ್ಚ ಪಾವತಿಯಾಗಿಲ್ಲ. ಇದರಿಂದ ಸಂಚಾರಿ ಆರೋಗ್ಯ ಘಟಕಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಮ್ಮ ಸಂಸ್ಥೆ ಅನವಶ್ಯಕ ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆ ಎದುರಿಸುವಂತಾಗಿದೆ. ಕಳೆದ ಎರಡೂವರೆ ವರ್ಷದಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ ಆರೋಗ್ಯ ಇಲಾಖೆ ನಿರ್ದೇಶಕರು ಹೊರ ಗುತ್ತಿಗೆ ಆಧಾರದಲ್ಲಿ ಪಡೆದಿರುವ ಸಂಚಾರಿ ಆರೋಗ್ಯ ಘಟಕಗಳ ಸೇವೆ ಬಹಳ ದುಬಾರಿಯಾಗಿದ್ದು, ಸರ್ಕಾರಕ್ಕೆ ಹೊರೆಯಾಗುವ ಸಾಧ್ಯತೆ ಇರುತ್ತದೆ.
ತಾವು ತಿಳಿಸಿರುವಂತೆ ಒಂದು ಮೊಬೈಲ್ ಯೂನಿಟ್ಗೆ 3.34.375.00 ರೂ.ಗಳು ತುಂಬಾ ದುಬಾರಿಯಾಗಿದೆ. ಅಲ್ಲದೆ ಸಂಚಾರಿ ಘಟಕಗಳನ್ನು ಪಡೆಯುವಾಗ ನಿರ್ದೇಶನಾಲಯದಿಂದ ಯಾವುದೇ ಹಣಕಾಸಿನ ಅನುಮೋದನೆ ಪಡೆದಿರುವುದಿಲ್ಲ.ಆದುದರಿಂದ ಸಂಚಾರಿ ಘಟಕದ ವೆಚ್ಚದ ಆಡಳಿತಾತ್ಮಕ ಅನುಮೋದನೆ ದೊರೆತಿರುವುದಿಲ್ಲ ಎಂದು ಉಲ್ಲೇಖೀಸಿರುವ ಪತ್ರವನ್ನು ಡಿಎಚ್ಒ ನೀಡಿರುತ್ತಾರೆ. ಆದರೆ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಮುಂದುವರಿಸಬೇಕೆ ಅಥವಾ ಸ್ಥಗಿತಗೊಳಿಸಬೇಕೆ ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿರುವುದಿಲ್ಲ. ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರು ಎಂಡೋಸಲ್ಪಾನ್ ಪೀಡಿತರ ಸೇವೆಗೆ ಸ್ಕೂಡ್
ವೇಸ್ ಕಾರ್ಯ ಅಗತ್ಯ ಎಂದಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಹ ಹೋಗಿದೆ. ಆದರೆ ಹಿರಿಯ ಅಧಿಕಾರಿಗಳು ಸ್ಥಳ ಭೇಟಿ ಮಾಡದೇ ಆರ್ಥಿಕ ಹೊರೆಯ ನೆಪ ಹೇಳಿ, ಮಾಡಿದ ಕೆಲಸಕ್ಕೆ ಅನುದಾನ ತಡೆಹಿಡಿದಿದ್ದಾರೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಆಪಾದಿಸಿದ್ದಾರೆ. ತಕ್ಷಣ ಅನುದಾನ ಬಿಡುಗಡೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ
ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ