Advertisement

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

01:17 AM Apr 30, 2024 | Team Udayavani |

ಹೊಸದಿಲ್ಲಿ: ಮುಖ್ಯಮಂತ್ರಿ ಹುದ್ದೆ ಅಲಂಕಾರಿಕ ಹುದ್ದೆಯಲ್ಲ. ಯಾವುದೇ ತುರ್ತು ಪರಿಸ್ಥಿತಿ ಸಂದರ್ಭ ಎದುರಿ ಸಲು ಸಿಎಂ ಸ್ವತಃ ಹಾಜರಿರಬೇಕಾಗುತ್ತದೆ ಎಂದು ಜೈಲಿನಲ್ಲಿರುವ ದಿಲ್ಲಿ ಸಿಎಂ ಕೇಜ್ರಿವಾಲ್‌ ವಿರುದ್ಧ ದಿಲ್ಲಿ ಹೈಕೋರ್ಟ್‌ ಮತ್ತೆ ಹರಿಹಾಯ್ದಿದೆ.

Advertisement

ದಿಲ್ಲಿ ಸರಕಾರಿ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆಯಾಗದಿರುವ ಪ್ರಕರ ಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆ ಸುತ್ತಿರುವ ದಿಲ್ಲಿ ಹೈಕೋರ್ಟ್‌ನ ಹಂಗಾ ಮಿ ಮುಖ್ಯ ನ್ಯಾ| ಮನ ಮೋಹನ್‌ ನೇತೃತ್ವದ ಪೀಠವು, ಸಿಎಂ ಗೈರು ಹಾಜರಾತಿಯಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಸಿಎಂ ಬಿಕ್ಕಟ್ಟು ಎದು ರಿಸಲು ದಿನದ 24 ಗಂಟೆಯೂ ಲಭ್ಯ ವಾಗಿ ರಬೇಕು ಎಂದು ಹೇಳಿತು.

ಬಂಧನ ಅಗತ್ಯ ಇರಲಿಲ್ಲ: ಸಿಂಘ್ವಿ

ಇ.ಡಿ. ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ಕೇಜ್ರಿವಾಲ್‌ ವಾದ ಆಲಿಸಿತು. ಸಿಎಂ ಬಂಧನ ಅಗ ತ್ಯವೇ ಇರಲಿಲ್ಲ. ಕೇಜ್ರಿ ವಿಚಾರಣೆಯಿಂದ ಅತೀತರಲ್ಲ. ನಿಜವಾದರೂ ಸಾಮಾನ್ಯ ವ್ಯಕ್ತಿಗಿರುವ ಹಕ್ಕುಗಳೂ ಅವರಿಗೂ ಇವೆ ಎಂದು ವಕೀಲ ಸಿಂಘ್ವಿ ಹೇಳಿದರು. ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next