Advertisement

ಆಕಸ್ಮಿಕ ಬೆಂಕಿಗೆ ಬಣವಿಗಳು ಭಸ್ಮ

01:27 PM Apr 19, 2019 | Team Udayavani |

ಧಾರವಾಡ: ಆಕಸ್ಮಿಕ ಬೆಂಕಿ ಅವಘಡದಿಂದ ಮೇವು-ಹೊಟ್ಟು- ಕಟ್ಟಿಗೆ ಬಣವಿಗಳು ಬೆಂಕಿಗಾಹುತಿಯಾದ
ಘಟನೆ ತಾಲೂಕಿನ ಮನಸೂರ ಗ್ರಾಮದಲ್ಲಿ ಗುರುವಾರ ನಡೆದಿದೆ. ಮಧ್ಯಾಹ್ನ ವೇಳೆ ಬಣವಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಕ್ಕಪಕ್ಕದ ಬಣವಿಗಳಿಗೂ ಬೆಂಕಿ ಚಾಚಿಗೊಂಡಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಿದ್ದಾರೆ.

Advertisement

ನಾಗನಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ನಿಂಗನಗೌಡ ಪಾಟೀಲ,
ಯಲ್ಲನಗೌಡ ಪಾಟೀಲ ಅವರ ಮಾಲಿಕತ್ವದ ಬಣವಿಗಳು ಭಸ್ಮಗೊಂಡಿವೆ. ಘಟನೆಯಲ್ಲಿ ಅಂದಾಜು 2ಲಕ್ಷ ಮೌಲ್ಯ ನಷ್ಟವಾಗಿದೆ. ಈ ಸುದ್ದಿ ತಿಳಿದು ತಹಶೀಲ್ದಾರ್‌ ಪ್ರಕಾಶ ಕುದರಿ, ಕಂದಾಯ ನಿರೀಕ್ಷಕ ಪಿ.ಎಂ.ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಅಶೋಕ ಮಾಡಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು

Advertisement

Udayavani is now on Telegram. Click here to join our channel and stay updated with the latest news.

Next