Advertisement

ಏಸು ಕ್ರಿಸ್ತರ ಆದರ್ಶ ನಮ್ಮದಾಗಲಿ: ಚಿಕ್ಕಮಗಳೂರು ಬಿಷಪ್‌

06:38 PM Jan 28, 2020 | Sriram |

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಎರಡನೇ ದಿನ ಚಿಕ್ಕಮಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿಸ್ವಾಮಿ ಬಲಿಪೂಜೆ ನೆರವೇರಿಸಿದರು.

Advertisement

ಬಳಿಕ ಸಂದೇಶ ನೀಡಿದ ಅವರು, ನಮ್ಮ ಸತ್ಕಾರ್ಯಗಳು ದೇವರ ಅನುಗ್ರಹಕ್ಕೆ ಪಾತ್ರವಾಗುವುದು. ಏಸುಕ್ರಿಸ್ತರು ಇಡೀ ಸಮಾಜದ ಒಳಿತನ್ನು ಬಯಸಿದ್ದರು. ನಾವೂ ಕೂಡ ಪರಸ್ಪರ ಪ್ರೀತಿ ಹಂಚಿ ಏಸು ಕ್ರಿಸ್ತರ ಆದರ್ಶವನ್ನು ಅನುಕರಣೆ ಮಾಡಬೇಕು ಎಂದರು.

ಬಸ್ರೂರು ಧರ್ಮಕೇಂದ್ರದ ಧರ್ಮಗುರು ವಂ| ಚಾರ್ಲ್ಸ್‌ ನೊರೊನ್ಹಾ, ಬೆಳ್ತಂಗಡಿ ಚರ್ಚ್‌ನ ವಲಯ ಪ್ರಧಾನ ಧರ್ಮಗುರು ವಂ| ಬೊನವೆಂಚರ್‌ ನಜ್ರೆತ್‌, ಮುಕಮರ್‌ ಚರ್ಚ್‌ ಧರ್ಮಗುರು ವಂ| ಲೂಯಿಸ್‌ ಡೇಸಾ ರಾತ್ರಿಯ ಬಲಿಪೂಜೆ ನೆರವೇರಿಸಿದರು.

ಇಂದಿನ ಕಾರ್ಯಕ್ರಮ
ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಒಟ್ಟು 11 ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗೆ 10.30ಕ್ಕೆ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೊಸ್‌ ಕಲಯಿಲ್‌ ಹಾಗೂ ಸಂಜೆ 6ಕ್ಕೆ ಶಿವಮೊಗ್ಗದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್‌ ಸೆರಾವೊ ಅವರಿಂದ ಕನ್ನಡ ಭಾಷೆಯಲ್ಲಿ ಬಲಿಪೂಜೆ ನೆರವೇರಲಿದೆ. 7ಕ್ಕೆ ಕೊಂಕಣಿಯಲ್ಲಿ ಬಲಿ ಪೂಜೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next