Advertisement

Attur church; ಭರವಸೆ, ನಂಬಿಕೆಯ ಪ್ರಾರ್ಥನೆಗೆ ಫಲ: ಬಿಷಪ್‌

01:37 AM Jan 25, 2024 | Team Udayavani |

ಕಾರ್ಕಳ: ನಮ್ಮನ್ನು ರಕ್ಷಿಸುವ ದೇವರನ್ನು ಅನವರತ ಜ್ಞಾಪಿಸುತ್ತಿರಬೇಕು. ಭರವಸೆ ಹಾಗೂ ನಂಬಿಕೆಯಿಂದ ಕೂಡಿದ ಪ್ರಾರ್ಥನೆ ಫಲ ನೀಡುವುದು. ಜೀವನದಲ್ಲಿ ಪ್ರಾರ್ಥನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದರು.

Advertisement

ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದ ಬಲಿಪೂಜೆಯನ್ನು ಬುಧವಾರ ನೆರವೇರಿಸಿ ಅವರು ಪ್ರಬೋಧನೆ ನೀಡಿದರು.

ವಿದೇಶಿಗರ ಸಹಿತ ಸಹಸ್ರಾರು ಭಕ್ತರು, ಪಾಲಕ ಸಂತ ಲಾರೆನ್ಸರ ಸಮ್ಮುಖ, ಪವಾಡ ಮೂರ್ತಿಯ ಬಳಿ ಪ್ರಾರ್ಥಿಸಿ ಹರಕೆಯ ಮೋಂಬತ್ತಿ ಬೆಳಗಿಸಿದರು. ಪುಟ್ಟ ಮಕ್ಕಳನ್ನು ದಿವ್ಯ ಬಲಿಪೀಠದ ಮೇಲೆ ಕುಳ್ಳಿರಿಸಿ ಹರಕೆ ತೀರಿಸಿದರು.

ದಿನದ ಇತರ ಬಲಿಪೂಜೆಗಳನ್ನು ಮಂಗಳೂರು ಫಾದರ್‌ ಮುಲ್ಲರ್‌ ಚರ್ಚ್‌ನ ವಂ| ಜಾನ್‌ ವಾಸ್‌, ಗಂಗೊಳ್ಳಿಯ ವಂ| ಆಲ್ಬರ್ಟ್‌ ಕ್ರಾಸ್ತಾ, ಮೂಡುಬೆಳ್ಳೆಯ ವಂ| ಪ್ರದೀಪ್‌ ಕಡೋಜಾ, ಗುಲ್ಬರ್ಗಾದ ವಂ| ಫ್ರಾನ್ಸಿಸ್‌ ಮಿನೇಜಸ್‌, ವಂ| ರಾಬರ್ಟ್‌ ಕ್ರಾಸ್ತಾ, ಶಿರ್ವದ ವಂ| ಲೆಸ್ಲಿ ಡಿ’ಸೋಜಾ, ಅತ್ತೂರು ಪುಣ್ಯಕ್ಷೇತ್ರದ ವಂ| ಆಲ್ಬನ್‌ ಡಿ’ಸೋಜಾ, ಉಡುಪಿಯ ವಂ| ರೋಯ್‌ ಲೋಬೊ ಅರ್ಪಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 10ಕ್ಕೆ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next