Advertisement

ಎಸೆಸೆಲ್ಸಿ ಪರೀಕ್ಷೆ: 570 ವಿದ್ಯಾರ್ಥಿಗಳು ಗೈರು

01:00 AM Mar 30, 2019 | Sriram |

ಮಂಗಳೂರು/ಉಡುಪಿ: ಎಸೆಸೆಲ್ಸಿಗೆ ಶುಕ್ರವಾರ ಸಮಾಜ ವಿಜ್ಞಾನ ಪರೀಕ್ಷೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ 29,765 ಮಂದಿ ವಿದ್ಯಾರ್ಥಿಗಳ ಪೈಕಿ 29,375 ಮಂದಿ ಹಾಜರಾಗಿದ್ದಾರೆ. 390 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ ನೋಂದಾಯಿ ಸಿದ 13,764 ವಿದ್ಯಾರ್ಥಿಗಳಲ್ಲಿ 180 ಮಂದಿ ಗೈರು ಹಾಜರಾಗಿ 13,584 ವಿದ್ಯಾರ್ಥಿಗಳು ಹಾಜರಾದರು.

ಪ್ರಶ್ನೆಪತ್ರಿಕೆಯು ಸ್ವಲ್ಪ ಮಟ್ಟಿಗೆ ಕಠಿನ ಮತ್ತು ಸುಲಭಗಳ ಸಮ್ಮಿಶ್ರಣವಾಗಿತ್ತು ಎಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ಸಮಾಜ ವಿಜ್ಞಾನ ಅಂಕ ಗಳಿಕೆ ಯನ್ನು ಹೆಚ್ಚಿಸಬಹುದಾದ ವಿಷಯವಾ ಗಿದ್ದು, ಹಿಂದಿನ ವಿಷಯಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಕಠಿನವಾಗಿತ್ತು; ವಿದ್ಯಾರ್ಥಿಗಳು ಆಲೋಚಿಸಿ, ಜ್ಞಾನವನ್ನು ಅನ್ವಯಿಸಿ ಉತ್ತರಿಸಬೇಕಾದಂಥ ಪ್ರಶ್ನೆಗಳಿ ದ್ದವು ಎಂಬ ಅಭಿಪ್ರಾಯ ಶಿಕ್ಷಕರದು.

Advertisement

Udayavani is now on Telegram. Click here to join our channel and stay updated with the latest news.

Next