Advertisement

ಈ ಬಾರಿ ಕೋವಿಡ್‌ ಪೂರ್ವ ಸ್ಥಿತಿಯಲ್ಲಿ ಎಸೆಸೆಲ್ಸಿ ಪರೀಕ್ಷೆ

08:18 PM Jul 24, 2022 | Team Udayavani |

ದಾವಣಗೆರೆ: ಎಸೆಸೆಲ್ಸಿ ವಿದ್ಯಾರ್ಥಿಗಳು ಈ ಬಾರಿ ಚೆನ್ನಾಗಿ ಅಭ್ಯಾಸ ಮಾಡಬೇಕಿದೆ. ಈ ವರ್ಷ ಪ್ರಶ್ನೆ ಪತ್ರಿಕೆಯಲ್ಲಿ  ಕಠಿನ ಪ್ರಶ್ನೆಗಳೂ ಇರಲಿವೆ. ಪಠ್ಯ ಕಡಿತ ಇರುವುದಿಲ್ಲ, ಕೃಪಾಂಕವೂ  ಇಲ್ಲ. ನಿಗದಿತ ಹಾಜರಾತಿಯೂ ಕಡ್ಡಾಯವಾಗಿದೆ.

Advertisement

2022-23ನೇ ಸಾಲಿನ  ಎಸೆಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪ ಹಾಗೂ ಕಠಿನತೆಯ ಮಟ್ಟವನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ಧರಿಸಿದ್ದು, 2019-20ನೇ ಸಾಲಿನ ಪ್ರಶ್ನೆಪತ್ರಿಕೆ ಸ್ವರೂಪ ಮುಂದುವರಿಯಲಿದೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್‌-19 ಕಾರಣದಿಂದಾಗಿ ವಿದ್ಯಾರ್ಥಿಗಳ ಸುರಕ್ಷೆ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆಯನ್ನು  ಸರಳಗೊಳಿಸಲಾಗಿತ್ತು. ಉತ್ತರ ಪತ್ರಿಕೆಯನ್ನು ಒಎಂಆರ್‌ ಶೀಟ್‌ಗೆ ಪೂರಕವಾದ ವಿನ್ಯಾಸದಲ್ಲಿ ನೀಡಲಾಗಿತ್ತು. ಜತೆಗೆ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿತ್ತು.

2021-22ರಲ್ಲಿ  ಭೌತಿಕವಾಗಿ ಶಾಲೆಗಳು 2ರಿಂದ 3 ತಿಂಗಳು ವಿಳಂಬವಾಗಿ ಆರಂಭವಾಗಿದ್ದವು ಹಾಗೂ ಶೇ.20ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಪ್ರಶ್ನೆಪತ್ರಿಕೆಯ ಕಠಿನತೆಯ ಮಟ್ಟವನ್ನು ಕಡಿಮೆಗೊಳಿಸಲಾಗಿತ್ತು. ಅಂದರೆ ಶೇ.20ರಷ್ಟಿದ್ದ ಕಠಿನ ಪ್ರಶ್ನೆಗಳನ್ನು ಶೇ.10ಕ್ಕೆ ಇಳಿಸಲಾಗಿತ್ತು. ಸುಲಭ ಪ್ರಶ್ನೆಗಳನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು. ಭೌತಿಕ ತರಗತಿಗಳು ಸರಿಯಾಗಿ ನಡೆಯದೆ ಇದ್ದುದರಿಂದ  ಶೇ.10ರಷ್ಟು ಕೃಪಾಂಕವನ್ನೂ ನೀಡಲಾಗಿತ್ತು.

ಶೇ.20ರಷ್ಟು ಕಠಿನ ಪ್ರಶ್ನೆ: 

Advertisement

ಪ್ರಸಕ್ತ ವರ್ಷ ಮೇ 16ರಿಂದಲೇ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಪ್ರಾರಂಭವಾಗಿರುವುದರಿಂದ  ಕೊರೊನಾ ಪೂರ್ವದಂತೆಯೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಈ ವರ್ಷ  ಶೇ.30ರಷ್ಟು ಸುಲಭದ ಪ್ರಶ್ನೆಗಳು, ಶೇ.50ರಷ್ಟು ಸಾಧಾರಣ ಪ್ರಶ್ನೆಗಳು ಹಾಗೂ ಶೇ.20ರಷ್ಟು ಕಠಿನ ಪ್ರಶ್ನೆಗಳು ಇರಲಿವೆ.

ಶೇ.75 ಹಾಜರಾತಿ ಕಡ್ಡಾಯ:

2020-21 ಹಾಗೂ 2021-22ರಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯಕ್ಕೆ ವಿನಾಯಿತಿ ನೀಡಲಾಗಿತ್ತು. ಈ ವರ್ಷ  ಪರೀಕ್ಷೆಗೆ ಶೇ.75ರಷ್ಟು ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಪೂರ್ಣ ಪ್ರಮಾಣದ ಪಠ್ಯವನ್ನು ಆಧರಿಸಿ ನಡೆಯಲಿದೆ. ಪ್ರಶ್ನೆ ಪತ್ರಿಕೆಯ ಸ್ವರೂಪ, ಕಠಿನತೆಯ ಮಟ್ಟ ವನ್ನು ಕಡಿಮೆ ಮಾಡದೆ 2019-20ನೇ ಸಾಲಿನಂತೆ ನಡೆಸಲು ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿದ್ದು, ಈ ಕುರಿತು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.ಜಿ.ಆರ್‌. ತಿಪ್ಪೇಶ್‌, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ದಾವಣಗೆರೆ 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next