Advertisement

ಚಲಿಸುತ್ತಿದ್ದ ರೈಲು ಡಿಕ್ಕಿ : ಓರ್ವ ಕುರಿಗಾಹಿ ಸೇರಿ 32 ಕುರಿಗಳ ದಾರುಣ ಸಾವು

07:08 PM Mar 28, 2022 | Team Udayavani |

ಶ್ರೀರಂಗಪಟ್ಟಣ : ಚಲಿಸುತ್ತಿದ್ದ ರೈಲಿಗೆ ಸಿಲುಕಿ 32 ಕುರಿಗಳು ಸೇರಿ ಓರ್ವ ಕುರಿಗಾಹಿ ದಾರುಣವಾಗಿ ಮೃತಪಟ್ಟ ಘಟನೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾ ಪ್ತಿಯಲ್ಲಿ ನಡೆದಿದೆ.

Advertisement

ಮೈಸೂರಿನಿಂದ ಶ್ರೀ ರಂಗಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಸ್ ಎಕ್ಸ್ ಪ್ರೆಸ್ ರೈಲಿಗೆ ಶ್ರೀರಂಗಪಟ್ಟಣ ಸವಮೀಪದ ಪಾಲಹಳ್ಳಿ ಹಾಗೂ ಪಶ್ವಿಮವಾಹಿನಿಯ ನಡುವಿನ ಮಧ್ಯ ಭಾಗದಲ್ಲಿ ಈ ಘಟನೆ ನಡೆದಿದೆ.

ರೈಲ್ಬೆ ಹಳಿ ಪಕ್ಕದಲ್ಲಿ ಮೇಯುತ್ತಿದ್ದ ಕುರಿಗಳು ರೈಲು ಆಗಮಿಸುವ ವೇಳೆ ರೈಲಿನ ಹಾರ್ನ್ ಶಬ್ದಕ್ಕೆ ಬೆದರಿ ರೈಲು ಹಳಿಗೆ ಬಂದು ನಿಂತಿವೆ. ರೈಲು ಬರುತ್ತಿದ್ದನ್ನು ಗಮನಿಸಿದ ಸ್ಥಳದಲ್ಲಿದ್ದ ಕುರಿಗಾಹಿ ಕುರಿಗಳನ್ನು ಓಡಿಸಲು ಬಂದಿದ್ದಾನೆ. ಈ ವೇಳೆ ಕುರಿಗಳ ಜೊತೆಗೆ ಆತನು ಕೂಡ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ‌.

ಪಾಂಡವಪುರ ತಾಲೂಕಿನ ಕೆ.ಬೆ್ಟಹಳ್ಳಿ ಗ್ರಾಮದ ನಿಂಗೇಗೌಡ ಎಂಬ ಕುರಿಗಾಯಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಮೈಸೂರಿನ ರೈಲ್ವೇ ಹಾಗೂ ಶ್ರೀರಂಗಪಟ್ಟಣ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಇದನ್ನೂ ಓದಿ : “ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ” ಪ್ರಿ-ಪೇಯ್ಡ್ ಪ್ಲಾನ್ ಲಾಂಚ್ ಮಾಡಿದ ಜಿಯೋ

Advertisement
Advertisement

Udayavani is now on Telegram. Click here to join our channel and stay updated with the latest news.

Next