Advertisement

ಶ್ರೀರಂಗಪಟ್ಟ ಪುರಸಭೆ: ನಾಲ್ವರು ನಾಮಪತ್ರ ಸಲ್ಲಿಕೆ

12:36 PM May 12, 2019 | Team Udayavani |

ಶ್ರೀರಂಗಪಟ್ಟಣ: ಪುರಸಭೆಗೆ ಮೇ 29ರಂದು ನಡೆಯಲಿರುವ ಚುನಾವಣೆಗೆ ಶನಿವಾರ ನಾಲ್ವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

Advertisement

ಸಾಮಾನ್ಯ ವರ್ಗಕ್ಕೆ ಮೀಸಲಾದ 5ನೇ ವಾರ್ಡ್‌ನಿಂದ ಜಿ.ಉಮಾಶಂಕರ್‌, ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ 10ನೇ ವಾರ್ಡ್‌ನಿಂದ ಎಂ.ಆರ್‌.ಪ್ರಸನ್ನ, ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿರುವ 18ನೇ ವಾರ್ಡ್‌ನಿಂದ ಗೀತಾಮಹೇಶ್‌ ಕಾಂಗ್ರೆಸ್‌ ಪಕ್ಷದಿಂದ ಒಂದು, ಪಕ್ಷೇತರರಾಗಿ ಮತ್ತೂಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ 21ನೇ ವಾರ್ಡ್‌ನಿಂದ ಎಸ್‌.ಕೆ.ಆರ್ಮುಗಂ ಕಿಶೋರ್‌ ಸೇರಿ ಒಟ್ಟು 4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯ ಸಮಿತಿ ಸದಸ್ಯರೂ ಆದ ಉಮಾಶಂಕರ್‌ ಮಾತನಾಡಿ, 5ನೇ ವಾರ್ಡ್‌ನಿಂದ ಆಯ್ಕೆ ಬಯಸಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿ ಪಕ್ಷದಿಂದ ಎಲ್ಲಾ 23 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. 13ಕ್ಕೂ ಹೆಚ್ಚ ಸ್ಥಾನ ಗೆದ್ದು ಪುರಸಭೆ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next