Advertisement

ಶ್ರೀರಂಗಪಟ್ಟಣ: ಆಲಿಕಲ್ಲು ಮಳೆಗೆ ನೂರಾರು ಗಿಳಿಗಳ ಸಾವು; ಸಾಮೂಹಿಕ ಅಂತ್ಯಸಂಸ್ಕಾರ

02:03 PM Apr 30, 2022 | Team Udayavani |

ಶ್ರೀರಂಗಪಟ್ಟಣ: ಶುಕ್ರವಾರ ರಾತ್ರಿ  ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮರದ ಮೇಲೆ ವಾಸವಾಗಿದ್ದ ನೂರಾರು ಗಿಳಿಗಳು ಮೃತಪಟ್ಟಿರುವ ಧಾರುಣ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗವಿದ್ದ ಮರದಲ್ಲಿ‌ ನೂರಾರು ಗಿಳಿಗಳು‌ ವಾಸವಾಗಿದ್ದು,ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಈ ವೇಳೆ ಮರದ ಬುಡ ಸಹಿತ ಕೆಳಗೆ ಬಿದ್ದು ಹಲವು ಗಿಳಿಗಳು ಮತ್ತು ಮರಿಗಳು ಮೃತಪಟ್ಟರೆ, ಉಳಿದವು ಆಲಿಕಲ್ಲುಗಳ ಪೆಟ್ಟು ತಾಳಲಾರದೆ ಮೃತಪಟ್ಟಿವೆ.

ನೂರಾರು ಗಿಳಿಗಳ ಸಾವು ಕಂಡು ಪಟ್ಟಣದ  ಜನರು‌ ಕಣ್ಣೀರಾಕಿ ಮರುಕ ವ್ಯಕ್ತಪಡಿಸಿದ್ದು ಮೃತ ಗಿಳಿಗಳನ್ನು ಗ್ರಾಮಸ್ಥರು ಸಾಮೂಹಿಕವಾಗಿ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next