Advertisement

ಶ್ರೀರಂಗಪಟ್ಟಣ ದಸರಾಕ್ಕೆ 2 ಕೋಟಿ ರೂ.ಗೆ ಪ್ರಸ್ತಾವನೆ

03:19 PM Sep 26, 2021 | Team Udayavani |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕಾ ದಸರಾ ಆಚರಿಸಲು ಸರ್ಕಾರಕ್ಕೆ 2 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅ.9 ರಿಂದ 3 ದಿನ ಶ್ರೀರಂಗಪಟ್ಟಣ ದಸರಾ ಉತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.

Advertisement

ಪಟ್ಟಣದ ಶೀರಂಗನಾಥಸ್ವಾಮಿ ಕಲ್ಯಾಣ ಮಂದಿರದಲ್ಲಿ ದಸರಾ ಆಚರಣೆ ಕುರಿತು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿ ಕಾರಿ, ಹಾಗೂ ಪೊಲೀಸ್‌ ಅಧಿಕಾರಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಲಹೆ ಪಡೆದು ಈ ವಿಷಯ ತಿಳಿಸಿದರು.

ಈ ಬಾರಿ ಕೋವಿಡ್‌ ನಿಯಮಗಳನ್ನು ಪಾಲಿಸಿ. ಮೂಲ ದಸರಾ ಆಚರಣೆ ಮಾಡುವ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಪಾರಂಪರಿಕ ದಸರಾವನ್ನು ಚೆನ್ನಾಗಿ ಆಚರಣೆ ಮಾಡಬೇಕಿದೆ. ಹಣದ ಕೊರತೆ ಇಲ್ಲದಂತೆ ಹೆಚ್ಚಿನ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿಸಿದರು.

ಉದ್ಘಾಟನೆಗೆ ಚಿಂತನೆ: ಮುಖ್ಯಮಂತ್ರಿ ಅಥವಾ ಇತರ ಜನಪ್ರತಿನಿಧಿ, ಕಲಾ ಸಾಹಿತಿಗಳು ಸೇರಿದಂತೆ ಇತರ ಹೆಸರಾಂತ ವ್ಯಕ್ತಿಗಳನ್ನು ದಸರಾ ಉದ್ಘಾಟನೆಗೆ ಕರೆಸಲು ಚಿಂತನೆ ನಡೆಯುತ್ತಿದೆ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮತ್ತೂಂದು ದಿನ ಶಾಸಕ ರೊಂದಿಗೆ ಸಭೆ ಕರೆಯಲಾಗುತ್ತದೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಮೆರವಣಿಗೆ ಬಳಿಕ ಶ್ರೀರಂಗ ವೇದಿಕೆಯಲ್ಲಿ 3 ದಿನ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿ ಹಣಖರ್ಚಾಗುವ ಆರ್ಕೇಸ್ಟ್ರಾ ಕಡಿಮೆಗೊಳಿಸಲಾಗುತ್ತದೆ. ದಸರಾ ಕ್ರೀಡಾ ಕೂಟ ಗಳಲ್ಲಿ ಕುಸ್ತಿ ಕಬಡಿ, ಇತರೆ ಆಟೋಟ ನಡೆ ಸಲುಸೂಚಿಸಲಾಗಿದೆ .ಸಾರ್ವಜನಿಕರು ಹಾಗೂ ಕಲಾವಿ ದರಿಗೆ ಈ ವೇಳೆ ತೊಡಕು ಉಂಟಾಗದಂತೆ ಹಾಗೂ ವೈದ್ಯಕೀಯ ಸೌಕರ್ಯ ಒದಗಿಸಿ ಎಂದರು.

Advertisement

ಕ್ರೀಡಾಂಗಣ ದುರಸ್ತಿ: ಶ್ರೀರಂಗಪಟ್ಟಣದ ಕ್ರೀಡಾಂಗಣದ ಛಾವಣಿ ಹಲವು ವರ್ಷಗಳಿಂದ ದುರಸ್ತಿ ಕಾಮಗಾರಿ ನಡೆಸದೆ ಇರುವುದು ಬೇಸರದ ಸಂಗತಿ. ಕಳೆದ 10 ವರ್ಷಗಳ ಹಿಂದೆ ಕ್ರೀಡಾ ಸಚಿವನಾಗಿ ನಾನು ಇರಲಿಲ್ಲ. ಇದೀಗ ನಾನು ಕ್ರೀಡಾ ಸಚಿವ ನಾಗಿದ್ದರಿಂದ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆ ಯಾಗಿದೆ. ಕಾಮಗಾರಿ ನಡೆಸಲು ಅಧಿಕಾರಿಗಳಿಂದ ವಿಳಂಬವಾಗಿದ್ದು ಹಣವನ್ನು ಹಂತಹಂತವಾಗಿ ನೀಡಲಾಗುತ್ತದೆ. ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಅಂಬೇಡ್ಕರ್‌ ಸ್ತಂಭ: ಪಟ್ಟಣದ ಹೃದಯ ಭಾಗದ ಅಂಬೇಡ್ಕರ್‌ ವೃತ್ತದಲ್ಲಿನ ಸ್ತಂಭ ಶಿಥಿಲಗೊಂಡಿರುವ ಬಗ್ಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ಸಚಿವರ ಗಮನಕ್ಕೆ ತಂದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಚಿವ ನಾರಾಯಣಗೌಡರು, ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಇಲ್ಲಿವರೆಗೆ 25 ಲಕ್ಷ ರೂ. ಹಣ ಬಿಡುಗಡೆಯಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ನಡೆಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರು ತಕ್ಷಣದಲ್ಲಿ ದುರಸ್ತಿ ನಡೆಸಲು ತಹಶೀಲ್ದಾರ್‌ ಮೂಲಕ ಹಾಗೂ ಲೋಕೋ  ಪಯೋಗಿ ಇಲಾಖೆಗೆ ಸೂಚನೆ ನೀಡಿದರು.

ಶಾಸಕ ಗೈರು: ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ದಸರಾದ ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಗೈರು ಹಾಜರಿ ಕಾಣುತ್ತಿತ್ತು. ಈ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ, ತುಮಕೂರಿನಲ್ಲಿ ಜೆಡಿಎಸ್‌ ಕಾರ್ಯಕಾರಣಿ ಸಭೆ ಇದೆ ಎಂದು ಶಾಸಕರು ತಿಳಿಸಿದ್ದಾರೆ.

ಅವರೊಂದಿಗೆ ನಾನು ಚರ್ಚೆ ಮಾಡಿದ್ದು ಇನ್ನೊಂದು ದಿನ ಶಾಸಕರೊಂದಿಗೆ ಸಭೆ ಕರೆದು ದಸರಾ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಎಸ್‌. ಅಶ್ವಥಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಅಶ್ವಿ‌ನಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಪಾಂಡವಪುರಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್‌ ಶ್ವೇತಾ, ಡಿವೈಎಸ್ಪಿ ಸಂದೇಶ್‌ಕುಮಾರ್‌, ಮುಖ್ಯಾಧಿಕಾರಿ ಮಾನಸ, ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರಿನಿಂದ ಆನೆ, ಕುದುರೆ ಆಗಮನ: ಪ್ರತಿ ವರ್ಷದಂತೆ ಚಾಮುಂಡೇಶ್ವರಿ ದೇವಿ ಹೊರಲು ಗಜಪಡೆ ಕಳುಹಿಸುವ ವಿಚಾರದಲ್ಲಿ ಈಗಾಗಲೇ ಪಳಗಿರುವ ಆನೆಗಳನ್ನು ನೀಡಲು ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಾರಿಯ ದಸರಾಗೆ ಮೈಸೂರಿನಿಂದ ಆನೆ ಹಾಗೂ ಕುದುರೆ ಕರೆಸಲಾಗುತ್ತಿದೆ. ಗಜಪಡೆಯೊಂದಿಗೆ ನಾಡದೇವಿಚಾಮುಂಡೇಶ್ವರಿಯನ್ನು ಹೊತ್ತ ಪಾರಂಪರಿಕ ದಸರೆ ಮೆರವಣಿಗೆ ಬನ್ನಿಮಂಟಪದಿಂದ ರಾಜಬೀದಿಯಲ್ಲಿ ಶ್ರೀರಂಗನಾಥ ದೇವಾಲಯದವರೆಗೂ ಜಂಬೂಸವಾರಿ ಮೂಲಕ ತೆರಳಲುರೂಪುರೇಷೆ ಮಾಡಿಕೊಳ್ಳಲಾಗುವುದು. ಈ ವೇಳೆ ಹಲವು ಸ್ಥಳೀಯ ಮತ್ತು ರಾಜ್ಯದ ವಿವಿಧಜಾನಪದ ಕಲಾತಂಡಗಳು, ವಿದ್ಯಾರ್ಥಿಗಳ ಪಥಸಂಚಲನ, ಪ್ರಮುಖ ಇಲಾಖೆಗಳ ಸ್ತಬ್ಧ ಚಿತ್ರ ಹಾಗೂ ಪೊಲೀಸ್‌ ಬ್ಯಾಂಡ್‌ ಜತೆಗೆ ನಿಯೋಜಿತ ಮಾರ್ಗದಲ್ಲಿ ತೆರಳುವುದು. ಪಟ್ಟಣವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರಗೊಳಿಸಲು ಸೂಚಿಸಲಾಗುತ್ತದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next