Advertisement

ಪಕ್ಷಗಳ ಅಭಿವೃದ್ಧಿಯೇ ಅಭ್ಯರ್ಥಿಗಳಿಗೆ ಶ್ರೀರಕ್ಷೆ

12:50 PM Mar 27, 2017 | Team Udayavani |

ನಂಜನಗೂಡು: ಇಲ್ಲಿನ ಜನತೆ ಕಾಂಗ್ರೆಸ್‌ಗೆ ಅಭೂತ ಪೂರ್ವ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಸಚಿವ ಡಾ.ಎಚ್‌.ಸಿ ಮಹದೇವಪ್ಪಹೇಳಿದರು. ಭಾನುವಾರ ಸಂಸದ ಆರ್‌. ಧ್ರುವ ನಾರಾಯಣ, ಅಭ್ಯರ್ಥಿ ಕಳಲೆ ಕೇಶವ ಮೂರ್ತಿಯವರೊಂದಿಗೆ ತಾಲೂಕಿನ ಯಡಳ್ಳಿ, ಮಡಕೇ ಹುಂಡಿ ಚನ್ನಪಟ್ಟಣ ಕಡಜೆಟ್ಟಿ, ಹೊಸ ಕಡಜೆಟ್ಟಿ ಅರಿಯೂರು, ಜಾಲ ಹಳ್ಳಿ ಕಂದೇಗಾಲ ಗ್ರಾಮಗಳಲ್ಲಿ ಕೈ ಪಕ್ಷ ಪರ ಚುನಾವಣಾ ಪ್ರಚಾರ ನಡೆಸಿದರು.

Advertisement

ನಂತರ ಮಾತನಾಡಿ, ಅಭಿವೃದ್ಧಿಯನ್ನೇ ಕಾಣಲಾಗದ ಈ  ಕ್ಷೇತ್ರದಲ್ಲಿ ಈಗ ಆರು ತಿಂಗಳಿಂದ ಆರಂಭ ಗೊಂಡ ಕಾಮಗಾರಿಗಳು ಇಲ್ಲಿನ ಜನತೆಯ ಮನ ಗೆಲ್ಲಲೂ ಸಹಕಾರಿಯಾಗಿದೆ ಎಂದರು. ಸಂಸದ ಆರ್‌. ಧ್ರುವನಾರಾಯಣ ರೊಂದಿಗೆ ತಾವು  ಐದು ತಿಂಗಳ ಹಿಂದೆ ಸಂಚಾರ ಮಾಡಿದ್ದು ಗ್ರಾಮಗಳ ಅವಶ್ಯಕತೆ ಯನ್ನು ಮನೆಗಂಡು ಮುಖ್ಯ ಮಂತ್ರಿಗಳಿಂದ ಹಣ ಬಿಡುಗಡೆ ಮಾಡಿಸಿ ಎಲ್ಲಾ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾಗಿ ಹೇಳಿದರು.

ಡಾ. ಎಚ್‌.ಸಿ  ಮಹದೇವಪ್ಪ ಮಾತನಾಡಿ, ಚುನಾವಣೆಯ ಉಸ್ತುವಾರಿ ವಹಿಸಿ ಕೊಂಡಿರುವ ತಮ್ಮ ಪಾಲಿಗೆ ಆ ಕಾಮಗಾರಿಗಳೇ ಚುನಾವಣೆಯ  ಅಸ್ತ್ರವಾಗಿದೆ. ಹಿಂದೆ ಇದ್ದವರೇ ಈ ಕೆಲಸ ಮಾಡಬಹುದಿತ್ತಲ್ಲಾವಾ, ಅವರು ಗ್ರಾಮಕ್ಕೆ ಭೇಟಿ ನೀಡಿದ್ದರೆ ಇಲ್ಲಿನ ಸಮಸ್ಯೆಯ ಅರಿವಾಗುತ್ತಿತ್ತು. ಅವರು ಇತ್ತ ಸುಳಿಯದೇ 8 ವರ್ಷ ಪೂರೈಸಿದರು ಎಂದು  ಆರೋಪಿಸಿದರು.

ಸಂಸದ ಆರ್‌.ಧ್ರುವ ನಾರಾಯಣ ಮಾತನಾಡಿ, ಕಾಂಗ್ರೆಸ್‌ ಯಾವುದೇ ಜಾತಿ ಪಂಥಕ್ಕೆ ಸೀಮಿತವಾಗಿಲ್ಲ. ಜನ ಸಾಮಾನ್ಯರು ನೋವು ನಲಿವುಗಳಿಗೆ ಸದಾ ಸ್ಪಂದಿಸುವುದರಿಂದಲೇ ಕಾಂಗ್ರೆಸ್‌ಗೆ  ಜನ ಮನ್ನಣೆ ನೀಡಿದ್ದಾರೆ ಎಂದರು. ಜಿಪಂ ಸದಸ್ಯೆ ಪುಷ್ಪಾ, ಮಾಜಿ ಅಧ್ಯಕ್ಷ ಧರ್ಮೇಂದ್ರ , ಮಾಜಿ ಉಪಾಧ್ಯಕ್ಷ ಮಡುವಿನ ಹಳ್ಳಿ ಶಂಕರಪ್ಪ, ಮಾಜಿ ಸದಸ್ಯರಾದ  ಕೆ. ಬಿ ಸ್ವಾಮಿ, ಮಾರುತಿ, ತಾಪಂ ಮಾಜಿ ಅಧ್ಯಕ್ಷ  ನಾಗೇಶ ರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next