Advertisement

ಎಪ್ರಿಲ್‌ 9 ರಂದು ಸಿದ್ದರಾಮಯ್ಯ ನಶೆ ಇಳಿಸಿ: ಶ್ರೀನಿವಾಸ್‌ ಪ್ರಸಾದ್‌

03:48 PM Apr 03, 2017 | |

ನಂಜನಗೂಡು: ಕ್ಷೇತ್ರದಲ್ಲಿ ಉಪಚುನಾವಣಾ ಪ್ರಚಾರದ ಕಾವು ಏರತೊಡಗಿದ್ದು ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಬಿಜೆಪಿ ಅಭ್ಯರ್ಥಿ,ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಅವರು ಸಿದ್ದರಾಮಯ್ಯ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Advertisement

‘ಸಿದ್ದರಾಮಯ್ಯ ದುರಾಹಾಂಕಾರಿ, ಉದ್ಧತಟತನದಿಂದ ವರ್ತಿಸುತ್ತಿದ್ದಾರೆ. ಕುಡಿದರೆ 3 ರಿಂದ 4 ಗಂಟೆ ಅಮಲು ಇರುತ್ತದೆ. ಆದರೆ ಸಿದ್ದರಾಮಯ್ಯಗೆ ಅಧಿಕಾರದ ಅಮಲು ತಲೆಗೆ ಏರಿ ಹೋಗಿದೆ. ಅದನ್ನು ಎಪ್ರಿಲ್‌ 9 ರಂದು ಮತದಾರರಾದ ನೀವು ಇಳಿಸಲು ಸಾಧ್ಯವಿದೆ’ ಎಂದು ಗುಡುಗಿದರು. 

‘ಸಿದ್ದರಾಮಯ್ಯ ಅವರಿಗೆ ವಿಷನ್‌ ಇಲ್ಲ, 5 ವರ್ಷ ಏನು ಮಾಡಬೇಕೆಂಬ ಯೋಚನೆಯೇ ಅವರ ಮನಸ್ಸಿನಲ್ಲಿಲ್ಲ. ದೂರದೃಷ್ಟಿಯ ಚಿಂತನೆ ಇಲ್ಲ’ ಎಂದು ಕಿಡಿ ಕಾರಿದರು. 

ಮುಲ್ಲಿಕಾರ್ಜುನ ಖರ್ಗೆ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಅವರು ‘ಖರ್ಗೆ ಇಲ್ಲಿ ಬಂದು ಪ್ರಚಾರ ಮಾಡ್ತಿದ್ದಾರೆ. ಆಗ ನನ್ನನ್ನು ಯಾಕೆ ಸಂಪುಟದಿಂದ ಕೈ ಬಿಟ್ಟಿರಿ ಅಂತ ಹೇಳಲಿಲ್ಲ.ನಾಚಿಗೆಯಾಗಬೇಕು ನಿಮಗೆ’ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next