Advertisement

Banner: ಕಾಫಿನಾಡ ಕಾಂಗ್ರೆಸ್ ಶಾಸಕನ ಬ್ಯಾನರ್ ಪ್ರೇಮ…!

10:10 AM Dec 19, 2023 | Team Udayavani |

ಚಿಕ್ಕಮಗಳೂರು: ರಸ್ತೆ ಗುಂಡಿ ಮುಚ್ಚಿಸಿ ಶಾಸಕರೊಬ್ಬರು ಬ್ಯಾನರ್ ಹಾಕಿಸಿಕೊಂಡು ಸಾರ್ವಜನಿಕರು ನಗೆಪಾಟಲಿಗೆ ಒಳಗಾದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

Advertisement

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರ  ಬ್ಯಾನರ್ ಪ್ರೇಮಕ್ಕೆ ಜನರು ನಗುವ ಪ್ರಸಂಗ ಬಂದಿದ್ದು, ಹೊಸ ರಸ್ತೆ ಮಾಡಿಸಿ ಬ್ಯಾನರ್ ಹಾಕಿಸಿಕೊಂಡ್ರಾ.. ಸರಿ..ಒಳ್ಳೆ ಕೆಲಸ.. ಸಂತೋಷ… ಒಪ್ಪಿಕೊಳ್ಳೋಣ.. ಅದು ಬಿಟ್ಟು ರಸ್ತೆ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಳ್ಳೋದು ಎಂದರೇನು ? ಇದು ಪ್ರಚಾರದ ಗೀಳಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಟ್ಟಣ ಪಂಚಾಯಿತಿಯ ಅನುದಾನದಲ್ಲಿ ರಸ್ತೆ ಗುಂಡಿ ಮುಚ್ಚಿಸುವ ಕೆಲಸ ನಡೆದಿದ್ದು, ಬ್ಯಾನರ್ ಹಾಕಿಸಿಕೊಂಡಿದ್ದು ಮಾತ್ರ ಶಾಸಕ ಟಿ.ಡಿ. ರಾಜೇಗೌಡ ಎಂಬ ವಿಚಾರವೀಗ ಸಾರ್ವಜನಿಕ ವಲಯಲ್ಲಿ ಶಾಸಕರ ಬ್ಯಾನರ್ ಪ್ರೇಮಕ್ಕೆ ಕೊಪ್ಪ ಜನತೆ ನುಗುತ್ತಿರೋ ಪ್ರಸಂಗ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next