Advertisement

ಕಾಂಗ್ರೆಸ್‌ ರೆಸಾರ್ಟ್‌ ನಿಂದ ಕಾಗೆವಾಡ ಶಾಸಕ ಎಸ್ಕೇಪ್‌ ?

08:52 AM Jul 19, 2019 | keerthan |

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಮಾಡುತ್ತಿದ್ದರೇ, ಅತ್ತ ಕಾಂಗ್ರೆಸ್‌ ನಾಯಕರು ಉಳಿದು ಕೊಂಡಿದ್ದ ರೆಸಾರ್ಟ್‌ ನಿಂದ ಕಾಗೆವಾಡ ಶಾಸಕ ಶ್ರೀಮಂತ ಪಾಟೀಲ್‌ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

Advertisement

ದೇವನಹಳ್ಳಿಯ ರೆಸಾರ್ಟ್‌ ನಲ್ಲಿ ಕಾಂಗ್ರೆಸ್‌ ನಾಯಕರು ಹಲವು ದಿನಗಳಿಂದ ಉಳಿದುಕೊಂಡಿದ್ದು, ಬುಧವಾರ ರಾತ್ರಿ ಶ್ರೀಮಂತ ಪಾಟೀಲ್‌ ಹೊರ ಹೋಗಿದ್ದಾರೆ ಎನ್ನಲಾಗಿದೆ. ನಂತರ ಕಾಂಗ್ರೆಸ್‌ ನಾಯಕರ ಫೋನ್‌ ಕರೆಗೂ ಶ್ರೀಮಂತ ಪಾಟೀಲ್‌ ಸಿಗುತ್ತಿಲ್ಲ ಎಂದೂ ವರದಿಯಾಗಿದೆ. ಈ ಬೆಳವಣಿಗೆ ಮೈತ್ರಿ ಕೂಟದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯಲಿರುವುದರಿಂದ ಮೈತ್ರಿ ಪಕ್ಷಗಳು ಮತ್ತು ವಿರೋಧ ಪಕ್ಷ ಬಿಜೆಪಿ ಶಾಸಕರ ಲೆಕ್ಕಾಚಾರದಲ್ಲಿ ತೊಡಗಿದೆ. ರೆಸಾರ್ಟ್‌ ನಿಂದ ಹೊರಹೋಗಿರುವ ಶ್ರೀಮಂತ ಪಾಟೀಲ್‌ ಮುಂದಿನ ನಡೆ ತೀವೃ ಕುತೂಹಲಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next