Advertisement

ಇಂದು ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ 

01:05 AM Aug 30, 2021 | Team Udayavani |

ಉಡುಪಿ/ಮಂಗಳೂರು: ಶ್ರೀಕೃಷ್ಣಮಠ ಸಹಿತ ನಾಡಿನೆಲ್ಲೆಡೆ ಸೋಮವಾರ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಮಂಗಳವಾರ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಸಾಂಪ್ರದಾಯಿಕವಾಗಿ ನಡೆ ಯ ಲಿದೆ. ದ.ಕ. ಜಿಲ್ಲೆಯಲ್ಲಿ ಸಾರ್ವ ಜನಿ ಕ ವಾಗಿ ಶ್ರೀಕೃಷ್ಣಾಷ್ಟಮಿ ಆಚರಣೆಗೆ ಅವಕಾಶ ವಿಲ್ಲದ ಕಾರಣ ಶ್ರೀಕೃಷ್ಣ ದೇವಾಲಯ ಗಳಲ್ಲಿ ಶ್ರೀದೇವರಿಗೆ ಸರಳವಾಗಿ ವಿಶೇಷ ಪೂಜೆ ನೆರವೇರಲಿದೆ. ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ,ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತಿದೆ.

Advertisement

ಶ್ರೀಕೃಷ್ಣಮಠದಲ್ಲಿ ಆ. 30ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸು ವರು. ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ಪೂಜೆಯ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಸ್ವಾಮೀಜಿ ಮುಹೂರ್ತ ಮಾಡುವರು. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ರಾತ್ರಿ ಮಹಾಪೂಜೆಯನ್ನೂ ನಡೆಸಿ ಮಧ್ಯರಾತ್ರಿ 12.15ಕ್ಕೆ ಸ್ವಾಮೀಜಿ ಯವರು ಇತರ ಸ್ವಾಮೀಜಿಯವರ ಜತೆಗೂಡಿ ಕೃಷ್ಣನಿಗೆ ಅಘÂìಪ್ರದಾನ ಮಾಡಲಿದ್ದಾರೆ. ಆ ಬಳಿಕ  ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅಘÂìವನ್ನು ಬಿಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಶ್ರೀಕೃಷ್ಣಮಠವನ್ನು ಪುಷ್ಪಗಳಿಂದ ಸೋಮವಾರ ಅಲಂಕರಿಸಲಾಗುತ್ತದೆ. ಆ. 30ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ, ಆ. 31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರ ವರೆಗೆ, ರಥೋತ್ಸವದ ಬಳಿಕ 5 ಗಂಟೆಯಿಂದ ದರ್ಶನಾವಕಾಶವಿದೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ದರ್ಶನ ಪಡೆಯಬೇಕು. ಯಾತ್ರಾರ್ಥಿಗಳು ವಿಶ್ವಪಥದ ಮೂಲಕ, ಸುದರ್ಶನ ಪ್ರವೇಶ ಪತ್ರ ಹೊಂದಿದ ಸ್ಥಳೀಯರು ಉತ್ತರ ಮತ್ತು ದಕ್ಷಿಣ ದ್ವಾರದಿಂದ ದರ್ಶನ ಪಡೆಯಬಹುದು.

ಕೊರೊನಾ ಕಾರಣದಿಂದ ಜನರ ನೂಕುನುಗ್ಗಲಿಗೆ ಅವಕಾಶ ಕೊಟ್ಟಿಲ್ಲ. ಇದೇ ಕಾರಣದಿಂದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಈ ವರ್ಷವೂ ಏರ್ಪಡಿಸಿಲ್ಲ. ಸರಕಾರದ ನಿಯಮಾ ನುಸಾರ ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಿಲ್ಲ. ಮಠದ ಸಿಬಂದಿ, ಗೋಪಾಲಕರು ಮಾತ್ರ ಭಾಗವಹಿಸಿ ಮೊಸರುಕುಡಿಕೆ ಉತ್ಸವವನ್ನು ಆಚರಿಸಲಿದ್ದಾರೆ.

ಶ್ರೀಕೃಷ್ಣಮಠದ ಎಲ್ಲ ಪೂಜೆ, ಉತ್ಸವಗ ಳನ್ನು ಆನ್‌ಲೈನ್‌ನಲ್ಲಿ ಬಿತ್ತ¤ರಿಸ ಲಾಗುತ್ತಿದೆ. ವಿವಿಧ ಸಂಘಟನೆಗಳು ಆನ್‌ಲೈನ್‌ ಸ್ಪರ್ಧೆಗಳನ್ನು ಏರ್ಪ ಡಿಸಿವೆ. ಮನೆಗಳಲ್ಲಿ ಕೃಷ್ಣಾಷ್ಟಮಿ ಆಚರಿಸು ವವರು ಮಾರುಕಟ್ಟೆಗಳಿಂದ ಬೇಕಾದ ಸಾಮಗ್ರಿಗಳನ್ನು ಖರೀದಿಸಿದ್ದು ಪೂಜೆ, ಭಜನೆ, ಅಘÂìಪ್ರದಾನಗಳಿಂದ ಕೃಷ್ಣಜಯಂತಿಯನ್ನು ನಡೆಸುತ್ತಿದ್ದಾರೆ.

Advertisement

ಪ್ರಸಕ್ತ ಸನ್ನಿವೇಶದಲ್ಲಿ ಕೃಷ್ಣ   ನೀತಿ ಮಾರ್ಗದ ಅಗತ್ಯ :

ರಾಮ ಮತ್ತು ಕೃಷ್ಣ ಭಗವಂತನ ಅವತಾರವಾದರೂ ಕಾಲ ಬೇರೆ ಬೇರೆ. ಹೀಗಾಗಿ ಅವರಿಬ್ಬರ ನಡವಳಿಕೆಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. ರಾಮಚಂದ್ರನ ನಡೆ ನೇರ ನೇರ ಇತ್ತು. ಅಲ್ಲಿ ತಪ್ಪುಗಳನ್ನು ರಾಮಚಂದ್ರ ಮಾಡುವುದಿಲ್ಲ ಅಥವಾ ತಪ್ಪು ಮಾಡದೆ ಬದುಕುವುದು ಹೇಗೆ ಎಂಬ ಸಂದೇಶ ಸಿಗುತ್ತದೆ. ಕೃಷ್ಣಾವತಾರ ಕಾಲದಲ್ಲಿ ಅದಲು ಬದಲು ಕಾಣುತ್ತದೆ. ಕಾರಣ ಸಾಮಾಜಿಕ ಸ್ಥಿತಿಗತಿಯೂ ಬದಲಾಗಿತ್ತು. ಶ್ರೀಕೃಷ್ಣ ತಪ್ಪು ಮಾಡಿದಂತೆ ಕಾಣುತ್ತದೆ. ಕಲಿಯುಗದಲ್ಲಿ ಈ ತರಹದಲ್ಲಿಯೇ ಇರಬೇಕೆಂದು ಕೃಷ್ಣ ತೋರಿಸಿಕೊಟ್ಟಿದ್ದಾನೆ.

ಶ್ರೀಕೃಷ್ಣ ಎಂದೂ ರಾಜನಾಗಲಿಲ್ಲ. ಆತ ರಾಜರು ಹೇಗಿರಬೇಕೆಂದು ತೋರಿಸಿಕೊಟ್ಟ. ಸುಮಾರು 5,000 ವರ್ಷಗಳ ಹಿಂದೆ ಮಹಿಳೆಯರು, ಗೋಪಾಲಕರಾದಿ ಕಂಸ, ಜರಾಸಂಧನಂತಹ ಉಗ್ರರಿಂದ ತತ್ತರಿಸುವಾಗ ಭಗವಂತ ಕೃಷ್ಣನಾಗಿ ಅವತರಿಸಿ ರಕ್ಷಿಸಿದ. “ಕರ್ಷತೀತಿ’ ಎಂಬಂತೆ ತನ್ನೆಡೆಗೆ ಆಕರ್ಷಿಸುವವನು ಅವನಾದ.

ಶ್ರೀಕೃಷ್ಣ ಮಾಡಿದ ಉಪಕಾರವನ್ನು ಸ್ಮರಿಸಲೋಸುಗ ಪ್ರತೀ ವರ್ಷ ಆತನ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಆತ ಎಲ್ಲೆಡೆ ಹಬ್ಬಿಕೊಂಡಿದ್ದ ದುರ್ಜನರನ್ನು ಮುಗಿಸಿದ್ದು ಲೋಕಕ್ಕೆ ಮಾಡಿದ ಉಪಕಾರ. ಈಗಲೂ ಎಲ್ಲರನ್ನು ಸದೆ ಬಡಿಯುವ ದುಷ್ಟರಿದ್ದಾರೆ. ಎಲ್ಲರನ್ನೂ ಬದುಕಲು ಬಿಡಬೇಕೆಂಬ ಕಲ್ಪನೆ ಭಾರತೀಯರದು. ಹೀಗಾಗಿಯೇ ಎಲ್ಲ ಧರ್ಮದವರಿಗೆ ಭಾರತದಲ್ಲಿ ಅವಕಾಶ ಸಿಕ್ಕಿದ್ದು. ಆದರೆ ಲೋಕಕ್ಕೆಲ್ಲ ಭಯ ಉಂಟು ಮಾಡುವ ಲೋಕ ಕಂಟಕರೂ ಮೂಡಿದರು. ಬೇರೆ ಬೇರೆ ಹೆಸರುಗಳಲ್ಲಿ ದೇಶ, ಸಮಾಜವನ್ನು ಹಾಳುಗೆಡಹುವವರು ಇದ್ದಾರೆ. ದೇಶ ಕಟ್ಟುವವರು ಕೃಷ್ಣನ ನೀತಿ ಪಾಠವನ್ನು ಅನುಸರಿಸಬೇಕು.

ಇಂದಿನ ಜಾಗತಿಕ ಪರಿಸ್ಥಿತಿ ನೋಡಿದರೆ ಕೃಷ್ಣ ಸಂದೇಶ, ಕೃಷ್ಣ ಜಯಂತಿ ಆಚರಣೆ, ಕೃಷ್ಣಮಾರ್ಗದ ನಡೆಯ ಅಗತ್ಯ ಕಂಡುಬರುತ್ತದೆ. ಮಾನವರಾಗಿ ಜನಿಸಿದ ಮೇಲೆ ಭಗವಂತನ ಕುರಿತಾದ ಜ್ಞಾನ ಸಂಪಾದಿಸಬೇಕು. ಜ್ಞಾನದ ಜತೆ ಕರ್ಮವನ್ನೂ ಮೇಳೈಸಿಕೊಂಡು ಕರ್ತವ್ಯದಲ್ಲಿ ರಾಜಕೀಯಪ್ರಜ್ಞೆಯನ್ನು ತೋರಬೇಕಾಗಿದೆ. ಶ್ರೀಕೃಷ್ಣಾಷ್ಟಮಿಯು ಕರ್ತವ್ಯಪ್ರಜ್ಞೆಯನ್ನು ಎಲ್ಲರಲ್ಲಿಯೂ ಮೂಡಿಸಲಿ. ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next