Advertisement

ಕೆ.ಶ್ರೀಕಾಂತ್ ಮುಡಿಗೆ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಓಪನ್ ಕಿರೀಟ

05:12 PM Jun 18, 2017 | Sharanya Alva |

ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಫೈನಲ್ ಹಣಾಹಣಿಯಲ್ಲಿ ವಿಶ್ವದ 47ನೇ ರಾಂಕಿನ ಜಪಾನ್ ಆಟಗಾರ ಕಾಜೂಮಾಸಾ ಸಕಾಯಿ ಅವರನ್ನು 21-11, 21-19 ಸೆಟ್ ಗಳ ಅಂತರದಿಂದ ಪರಾಜಯಗೊಳಿಸುವ ಮೂಲಕ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಪುರುಷರ ಸಿಂಗಲ್ಸ್ ಟೈಟಲ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Advertisement

ಅಮೋಘ ಆಟವಾಡಿದ್ದ ಭಾರತದ ಬ್ಯಾಡ್ಮಿಂಟನ್‌ ಆಟಗಾರ ಕೆ.ಶ್ರೀಕಾಂತ್‌ ವಿಶ್ವ ನಂ.1 ಕೊರಿಯಾದ ಸನ್‌ ವಾನ್‌ ಹೊ ಅವರನ್ನು ಮಣಿಸಿ ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ಗೇರಿದ್ದರು.

ಗೆಲ್ಲುವ ಏಕೈಕ ಗುರಿಯೊಂದಿಗೆ ಹೋರಾಡಿದ್ದ ಶ್ರೀಕಾಂತ್‌ 21-15, 18-21, 24-22 ಗೇಮ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೇರಿದ್ದರು. ಈ ಹೋರಾಟ ಒಂದು ತಾಸು ಮತ್ತು 12 ನಿಮಿಷಗಳವರೆಗೆ ಸಾಗಿತ್ತು.



Advertisement

Udayavani is now on Telegram. Click here to join our channel and stay updated with the latest news.

Next