Advertisement

ತಿಮ್ಮಪ್ಪನ ಹುಂಡಿ ಕಾಣಿಕೆಯಲ್ಲಿ ಇಳಿಕೆ!

01:27 PM Oct 11, 2019 | Team Udayavani |

ತಿರುಪತಿ: ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರಾದರೂ, ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಬರುವ ಹಣದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 12.75 ಲಕ್ಷ ರೂ.ಗಳಷ್ಟು ಇಳಿಕೆಯಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಲ್‌ ತಿಳಿಸಿದ್ದಾರೆ.

Advertisement

“9 ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವಕ್ಕೆ ಕಳೆದ ವರ್ಷ 5.90 ಲಕ್ಷ ಭಕ್ತಾದಿಗಳು ಆಗಮಿಸಿದ್ದರು. ಈ ಬಾರಿ, 7.07 ಲಕ್ಷ ಭಕ್ತರು ಬಂದಿದ್ದಾರೆ. ಕಳೆದ ಬಾರಿ ಹುಂಡಿಗಳಲ್ಲಿ 20.52 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು, ಈ ಬಾರಿ, 20.40 ಕೋಟಿ ರೂ. ಸಂಗ್ರಹವಾಗಿದೆ” ಎಂದು ತಿಳಿಸಿದ್ದಾರೆ. ಈ ಬಾರಿ 34.10 ಲಕ್ಷ ಲಡ್ಡುಗಳ ವಿತರಣೆ ಮಾಡಲಾಗಿದೆ. ಕಳೆದ ಬಾರಿ 24.01 ಲಕ್ಷ ಲಡ್ಡು ವಿತರಿಸಲಾಗಿತ್ತು ಎಂದು ಅನಿಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next