Advertisement

ಪ್ರೊ.ವೆಂಕಟಸುಬ್ಬಯ್ಯಗೆ ಶ್ರೀರಂಗಪಟ್ಟಣ ನಾಗರಿಕರ ಶ್ರದ್ಧಾಂಜಲಿ

03:06 PM Apr 21, 2021 | Team Udayavani |

ಶ್ರೀರಂಗಪಟ್ಟಣ: ನಿಧನರಾದ ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆಶ್ರೀರಂಗಪಟ್ಟಣ ನಾಗರಿಕರಿಂದಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಟ್ಟಣದ ಲಕ್ಷ್ಮೀ ನರಸಿಂಹಸ್ವಾಮಿದೇವಾಲಯದ ಆವರಣದಲ್ಲಿ ವಿವಿಧಸಂಘಟನೆಗಳ ಮುಖಂಡರು, ಚಿಂತಕರು,ಸಾಹಿತಿಗಳು ಭಾಗವಹಿಸಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಕುರಿತುಮಾತನಾಡಿದರು.

Advertisement

ತಾಲೂಕಿನ ಹಿರಿಯ ಸಾಹಿತಿಜಿ.ವೆಂಕಟಸುಬ್ಬಯ್ಯ ಅವರು ಪದ್ಮಶ್ರೀಪಡೆದು ಎತ್ತರ ಶಿಖರದಲ್ಲಿದ್ದರೂ ತವರಿನಗೌರವ ಎಂದುಕೊಂಡು ಶ್ರೀರಂಗಪಟ್ಟಣಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಗೌರವಸ್ವೀಕರಿಸಿ ಪಾಲ್ಗೊಂಡಿದ್ದರು. ಅವರ ಈಅಭಿಮಾನಕ್ಕೆ ಶ್ರೀರಂಗಪಟ್ಟಣ ನಾಗರಿಕರವೇದಿಕೆ ಅವರನ್ನು ಈ ಸಂದರ್ಭದಲ್ಲಿಸ್ಮರಿಸುವುದು ಅಭಿಮಾನದ ಗೌರವನೀಡಿದಂತಾಗಿದೆ ಎಂದು ಕಸಾಪ ಮಾಜಿಅಧ್ಯಕ್ಷ ವಕೀಲ ಪುಟ್ಟಸ್ವಾಮಿ ತಿಳಿಸಿದರು.

ರಾಜ್ಯ ಶಿಕ್ಷಕೇತರ ಸಂಘದ ಅಧ್ಯಕ್ಷ ಎನ್‌.ಕೆ.ನಂಜಪ್ಪಗೌಡ ಮಾತನಾಡಿದರು. ಕಸಾಪಮಾಜಿ ಅಧ್ಯಕ್ಷ ಪುರುಷೋತ್ತಮ ಚಿಕ್ಕಪಾಳ್ಯ,ಉಮೇಶ್‌ ಕುಮಾರ್‌, ಸಾವೇರಸ್ವಾಮಿ,ಮಹದೇವು ಲಾಳಿಪಾಳ್ಯ,ನಾರಾಯಣಸ್ವಾಮಿ, ಪುಟ್ಟೇಗೌಡ, ವಾಸುಮತ್ತಿತರರು ಪುಷ್ಪ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next