Advertisement

ಮಂತ್ರಾಲಯಕ್ಕೆ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭೇಟಿ

12:35 AM Dec 22, 2023 | Team Udayavani |

ಉಡುಪಿ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಪಟ್ಟಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಬುಧವಾರ ಭೇಟಿ ನೀಡಿದರು.

Advertisement

ಮಂತ್ರಾಲಯ ಶ್ರೀಗುರು ಸಾರ್ವಭೌಮ ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಅಧಿಕಾರಿಗಳು, ಪಂಡಿತರು ಶ್ರೀಪಾದರನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಿದರು. ಅನಂತರ ಶ್ರೀಪಾದರು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೂಲವೃಂದಾವನ ಹಾಗೂ ಶ್ರೀ ವಾದೀಂದ್ರತೀರ್ಥರ ದರ್ಶನ ಪಡೆದರು.

ಮಂತ್ರಾಲಯ ಶ್ರೀ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಪುತ್ತಿಗೆ ಶ್ರೀಪಾದರನ್ನು ಉಂಜಾಳ ಮಂಟಪದಲ್ಲಿ ಸಮ್ಮಾನಿಸಿ, ಶ್ರೀ ಮಠದ ವತಿಯಿಂದ ಪುತ್ತಿಗೆ ಪರ್ಯಾಯಕ್ಕೆ 2 ಲ.ರೂ. ದೇಣಿಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next