Advertisement

ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

06:14 AM Jan 12, 2019 | |

ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 42ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ 18ನೇ ವರ್ಷದ  ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದ್ದು, ಇದೇ ಜ. 25ರ ಶುಕ್ರವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾದರ ಸಂಘದ ಆಡಿಟೋರಿಯಂನಲ್ಲಿ ನಡೆಯಲಿದೆ.

Advertisement

ಹಿರಿಯ ಪ್ರಚಾರಕರ್ತ ದಿವಂಗತ ಡಿ.ವಿ ಸುಧೀಂದ್ರ ತಮ್ಮ ಸಂಸ್ಥೆಗೆ 25ವರ್ಷ ತುಂಬಿದ ಸಂದರ್ಭದಲ್ಲಿ ಚಿತ್ರರಂಗದ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಎರಡು ಪ್ರಶಸ್ತಿಗಳೊಂದಿಗೆ ಆರಂಭವಾದ ಈ ಪ್ರಶಸ್ತಿಯ ಸಂಖ್ಯೆ ಈಗ 11ಕ್ಕೆ ಏರಿದೆ. ಪ್ರಸ್ತುತ ಈ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್‌, ಸುನೀಲ್‌ ಹಾಗೂ ವಾಸುದೇವ್‌ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಪ್ರಶಸ್ತಿ ವಿವರ ಹೀಗಿದೆ
* ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕ (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
* ಬನ್ನಂಜೆ ಗೋವಿಂದಾಚಾರ್‌, ಹಿರಿಯ ಪತ್ರಕರ್ತರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
* ಎಸ್‌. ಜಾನಕಿ, ಹಿರಿಯ ಗಾಯಕಿ (“ಡಾ. ರಾಜಕುಮಾರ್‌ ಪ್ರಶಸ್ತಿ’) 
* ಪಿ.ವಾಸು, ಹಿರಿಯ ನಿರ್ದೇಶಕ  (“ಆರ್‌.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’)  
* ಆರೂರು ಸತ್ಯಭಾಮ, ಹಿರಿಯ ನಟಿ  (ಶ್ರೀಮತಿ ಜಯಮಾಲ ಎಚ್‌.ಎಂ ರಾಮಚಂದ್ರ ಪ್ರಶಸ್ತಿ)
* ವಾಸುಕಿ ವೈಭವ್‌, ಸಂಗೀತ ನಿರ್ದೇಶಕ (ಉತ್ತಮ ಸಂಗೀತ ನಿರ್ದೇಶನ )
* ರಿಷಭ್‌ ಶೆಟ್ಟಿ, ನಟ, ನಿರ್ದೇಶಕ (ಉತ್ತಮ ಕಥೆ)
* ಬಿ.ಎ.ಮಧು, ಹಿರಿಯ ಸಂಭಾಷಣೆಕಾರ (ಅತ್ಯುತ್ತಮ ಸಂಭಾಷಣೆ ) 
* ಕಾರ್ತಿಕ್‌ ಸರಗೂರು, ನಿರ್ದೇಶಕ (ಅತ್ಯುತ್ತಮ ಚೊಚ್ಚಲ ನಿರ್ದೇಶನ)
* ಚಂಪಾ ಶೆಟ್ಟಿ, ನಿರ್ದೇಶಕಿ (ಅತ್ಯುತ್ತಮ ಚೊಚ್ಚಲ ನಿರ್ದೇಶನ))
* ಕೆ.ಕಲ್ಯಾಣ, ಗೀತಸಾಹಿತಿ (ಉತ್ತಮ ಗೀತರಚನೆ)
* ದೊಡ್ಡಣ್ಣ, ಹಿರಿಯ ನಟ (ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ)

Advertisement

Udayavani is now on Telegram. Click here to join our channel and stay updated with the latest news.

Next