Advertisement

 ಶ್ರೀ ನರಹರಿ ಪರ್ವತ ದೇವಸ್ಥಾನ: ಬಾಲಾಲಯ ಪ್ರತಿಷ್ಠೆ

02:45 AM Jul 14, 2017 | |

ಬಂಟ್ವಾಳ : ಪಾಣೆಮಂಗಳೂರಿನ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನದ  ಪುನರ್‌ ನಿರ್ಮಾಣ ಕಾರ್ಯದ ಪ್ರಥಮ ಹಂತವಾಗಿ ದೇವಸ್ಥಾನದ ಮುಖ್ಯ ಪರಿವಾರ ದೇವರಾದ ಶ್ರೀ ಮಹಾಗಣಪತಿ, ಶ್ರೀ ನಾಗದೇವರ ಬಾಲಾಲಯ ಪ್ರತಿಷ್ಠೆ ನಡೆಯಿತು.

Advertisement

ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ವೇ| ಮೂ| ನಿಲೇಶ್ವರ ಉಚ್ಚಿಲತ್ತಾಯ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ ಮತ್ತು ವೈದಿಕರು ವೈದಿಕ ವಿಧಿ ವಿಧಾನಗಳೊಂದಿಗೆ ದೇಗುಲದ ಸಮೀಪ ಪರಿವಾರ ದೇವರುಗಳಿಗೆ ಬಾಲಾಲಯ ಪ್ರತಿಷ್ಠೆ ಮಾಡಲಾಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಪ್ರಶಾಂತ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಆತ್ಮರಂಜನ್‌ ರೈ, ಉತ್ಸವ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ. ನರೇಂದ್ರ ಬಾಬು, ಹಿರಿಯ ಪತ್ರಕರ್ತ ಯಶು ವಿಟ್ಲ, ಮೊಕ್ತೇಸರರಾದ ಕೃಷ್ಣ ನಾ„ಕ್‌, ಸುಂದರ ಬಂಗೇರ, ಎಂ. ಎನ್‌. ಕುಮಾರ್‌, ಬಾಲಕೃಷ್ಣ ಪೂಜಾರಿ, ಮಾಧವ ಶೆಣೆ„, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಶಂಕರ ಆಚಾರ್ಯ ಬರಿಮಾರ್‌, ಕಿಶೋರ್‌ ಕುಮಾರ್‌ ಕುದು¾ಲ್‌, ಶಿಲ್ಪಿ ರಾಜೇಂದ್ರ ಕುಮಾರ್‌, ಶ್ರೀನಿವಾಸ್‌ ಗುರುಜ್ಯೋತಿ, ರುಕ್ಮಯ್ಯ ಸಪಲ್ಯ ಮೆಲ್ಕಾರ್‌, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಸತೀಶ ಪಿ. ಸಾಲ್ಯಾನ್‌, ಚಂದ್ರಶೇಖರ್‌ ನಾ„ಕ್‌, ಗಿರೀಶ್‌ ಸಾಲ್ಯಾನ್‌, ಸುಬ್ರಹ್ಮಣ್ಯ ಕಾರಂತ್‌, ತಾರಾನಾಥ್‌, ಶಿವರಾಮ್‌ ಶೆಟ್ಟಿ, ದಯಾನಂದ ಬೊಂಡಾಲ, ಸದಾನಂದ ಬೋಳಂಗಡಿ, ನರಹರಿ ಪರ್ವತದ ಮ್ಯಾನೇಜರ್‌ ಆನಂದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next