Advertisement

ಶ್ರೀಲಂಕಾ ಪ್ರಧಾನಿಯ ಇಂದಿನ ಕೊಲ್ಲೂರು ಭೇಟಿ ಮುಂದೂಡಿಕೆ 

01:00 PM Aug 27, 2017 | Team Udayavani |

ಉಡುಪಿ : ಭಾರೀ ಮಳೆ ಮತ್ತು ಪ್ರತೀಕೂಲ ಹವಮಾನದ ಕಾರಣದಿಂದಾಗಿ ಇಂದು ಭಾನುವಾರ ನಡೆಯಬೇಕಾಗಿದ್ದ ಶ್ರೀಲಂಕಾ ಪ್ರಧಾನಮಂತ್ರಿ ರಣಿಲ್‌ ವಿಕ್ರಮ ಸಿಂಘೆ ಅವರ ಶ್ರೀ ಕ್ಷೇತ್ರ ಕೊಲ್ಲೂರು ಭೇಟಿಯನ್ನು ಮುಂದೂಡಲಾಗಿದೆ. 

Advertisement

ಸಿಂಘೆ ಅವರು ಕುಟುಂಬ ಸಮೇತರಾಗಿ ಇಂದು  ಕೊಲ್ಲೂರಿಗೆ ಆಗಮಿಸಬೇಕಾಗಿತ್ತು. ಉಡುಪಿ ಜಿಲ್ಲೆಯಲ್ಲಿ  ದಟ್ಟ ಮೋಡ ಕವಿದ ವಾತಾವರಣ ಇರುವ ಕಾರಣದಿಂದ ಭೇಟಿಯನ್ನು ಇನ್ನೊಂದು ದಿನಕ್ಕೆ ನಿಗದಿ ಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. 

ದೇವಸ್ಥಾನದ ಆವರಣದಲ್ಲಿ  ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ದೇವಾಲಯದ ಸುತ್ತಲಿನ ಅಂಗಡಿಗಳ ಬಾಗಿಲು ತೆರೆಯದಂತೆ ಸೂಚನೆ ನೀಡಲಾಗಿತ್ತು. ಇದೀಗ ಭೇಟಿ ರದ್ದಾಗಿರುವ ಹಿನ್ನಲೆಯಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ದೇವಾಲಯದಲ್ಲೂ ಎಂದಿನಂತೆ ಮೂಕಾಂಬಿಕೆಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು ಅಲ್ಲಿಂದಲೇ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next