Advertisement

ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ಭೇಟಿ: ಭಕ್ತರಿಗೆ ಅಡಚಣೆ

01:16 AM Jul 28, 2019 | sudhir |

ಕೊಲ್ಲೂರು: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್‌ ಸಿಂಘ ಅವರು ಶುಕ್ರವಾರ ಕೊಲ್ಲೂರು ಕ್ಷೇತ್ರ ದರ್ಶನಕ್ಕೆ ಆಗಮಿಸಿದ್ದ ಕಾರಣ ಸುಮಾರು 9 ತಾಸುಗಳ ಕಾಲ ಭಕ್ತರಿಗೆ ಶ್ರೀದೇವಿಯ ದರ್ಶನ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರಿಗೆ ಅಡಚಣೆ ಉಂಟುಮಾಡಿತ್ತು.

Advertisement

ಬೆಳಗ್ಗಿನಿಂದ ಸರಿಸುಮಾರು ಸಂಜೆಯ ತನಕ ಖಾಕಿ ಬಟ್ಟೆಯ ಭದ್ರತಾ ವ್ಯವಸ್ಥೆಯು ಭಕ್ತರನ್ನು ಮುಜುಗರಕ್ಕೆ ಎಡೆಮಾಡಿತ್ತು. ನಾನಾ ರಾಜ್ಯಗಳಿಂದ ಆಗಮಿಸಿದ್ದ, ಅನ್ಯ ಕಾರ್ಯ ನಿಮಿತ್ತ ತುರ್ತು ತೆರಳಬೇಕಾಗಿದ್ದ ಅನೇಕ ಭಕ್ತರಿಗೆ ಈ ರೀತಿಯ ತಾಸುಗಟ್ಟಲೆ ನಿರ್ಬಂಧವು ಅವರ ಮೇಲೆ ಪ್ರಭಾವ ಬೀರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next