Advertisement

6 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

09:55 PM Aug 28, 2022 | Team Udayavani |

ಚೆನ್ನೈ: ಭಾರತ-ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ. ಒಟ್ಟು ಆರು ಮೀನುಗಾರರನ್ನು ಬಂಧಿಸಲಾಗಿದ್ದು, ಇನ್ನುಳಿದವರನ್ನು ಬೆನ್ನಟ್ಟಿ ಬಂದಿರುವುದಾಗಿ ತಮಿಳುನಾಡಿನ ರಾಮೇಶ್ವರಂನ ಮೀನುಗಾರರ ಸಂಘ ಆರೋಪಿಸಿದೆ.

Advertisement

ಮೀನುಗಾರರು ಭಾರತೀಯ ಸಮುದ್ರ ಮಿತಿಯೊಳಗೆ ಇದ್ದರೂ ಅವರನ್ನು ಬಂಧಿಸಲಾಗಿದೆ ಎಂದು ಸಂಘವು ಆರೋಪಿಸಿದ್ದು, ಭಾನುವಾರ ಪ್ರತಿಭಟನೆಯನ್ನೂ ನಡೆಸಿದೆ.

ಕೂಡಲೇ ನಮ್ಮ ಮೀನುಗಾರರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ರಾಮನಾಥಪುರಂನ ಸಂಸದ ಕೆ.ನವಾಸ್‌ ಕನಿ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೂ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next