Advertisement

ಸ್ಫೋಟಕ್ಕೆ ಬೆದರಿದ ಶ್ರೀಲಂಕಾದಲ್ಲಿ ಈಗ ಕತ್ತಿ, ಚಾಕುಗಳೂ ವಶಕ್ಕೆ!

01:51 AM May 06, 2019 | Sriram |

ಕೊಲೊಂಬೋ: ಈಸ್ಟರ್‌ ಹಬ್ಬದ ದಿನದ ನಡೆದ ಭೀಕರ ಬಾಂಬ್‌ ದಾಳಿಗೆ ಬೆಚ್ಚಿ ಬಿದ್ದಿರುವ ಶ್ರೀಲಂಕಾ ದೇಶಾದ್ಯಂತ ವಿಪರೀತ ಭದ್ರತೆಗೆ ಮುಂದಾಗಿದೆ. ಆದರೆ ವಿಚಿತ್ರ ಆದೇಶ ವೊಂದನ್ನು ಹೊರಡಿಸುವ ಶ್ರೀಲಂಕಾ ಅಧಿಕಾರಿಗಳು, ಜನಸಾಮಾನ್ಯರ ಬಳಿ ಇರುವ ಖಡ್ಗ, ದೊಡ್ಡ ಚಾಕುಗಳನ್ನೂ ವಶಪಡಿಸಿ ಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ಆದೇಶ ಹೊರಡಿಸಿರುವ ಶ್ರೀಲಂಕಾ ಪೊಲೀಸ್‌ ಇಲಾಖೆ, ಅವುಗಳನ್ನು ಸಮೀಪದ ಪೊಲೀಸ್‌ ಸ್ಟೇಷನ್‌ಗೆ ಒಪ್ಪಿಸುವಂತೆ ಸೂಚಿಸಿದೆ.

Advertisement

ಅಷ್ಟೇ ಅಲ್ಲ, ರವಿವಾರ ಶಾಲೆಯ ಬಳಿ ಯಾವುದೇ ವಾಹನವನ್ನು ನಿಲ್ಲಿಸದಂತೆಯೂ ನಾಗರಿಕರಿಗೆ ಸೂಚಿಸಲಾಗಿದ್ದು, ಈ ಭಾಗದಲ್ಲಿ ರವಿವಾರಶೋಧ ಕಾರ್ಯ ನಡೆಯಲಿದೆ ಎಂದಿದೆ. ದಾಳಿ ನಡೆದ ಅನಂತರದಲ್ಲಿ ದೇಶದ ಹಲವೆಡೆ ಶೋಧ ಕಾರ್ಯ ನಡೆಸಿದಾಗ ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಟಿವಿ ಮೂಲಕ ಪ್ರಾರ್ಥನೆ: ಈಸ್ಟರ್‌ಸ್ಫೋಟದಿಂ ದಾಗಿ ಇನ್ನೂ ಕ್ರೈಸ್ತರು ಚರ್ಚ್‌ಗೆ ಹೋಗಲು ಹೆದರುತ್ತಿದ್ದು, ರವಿವಾರಮನೆಯಲ್ಲೇ ಕುಳಿತು ಪ್ರಾರ್ಥನೆ ನಡೆಸಿದರು. ಕೊಲಂಬೋದ ಪಾದ್ರಿ ಕಾರ್ಡಿನಲ್ ಮಾಲ್ಕಂ ರಂಜಿತ್‌ ಪ್ರಾರ್ಥನೆ ಯನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next