Advertisement

ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಿತ್ರ ಮಂಡಳಿ: ಪುಸ್ತಕ ವಿತರಣೆ

03:25 PM Jul 22, 2018 | Team Udayavani |

ಮುಂಬಯಿ: ಮುಂಬಯಿ ಮಹಾನಗರದ ಪ್ರತಿಷ್ಠಿತ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಿತ್ರ ಮಂಡಳಿ ಸಾಕಿನಾಕಾ ಇದರ ವತಿಯಿಂದ ಪರಿಸರದ ತುಳು-ಕನ್ನಡಿಗರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಜು. 15 ರಂದು ಸಂಜೆ ಶ್ರೀ ದುರ್ಗಾಪರಮೇಶ್ವರಿ ಮಂದಿರ ಸಾಕಿನಾಕಾ ಇಲ್ಲಿ ನಡೆಯಿತು.

Advertisement

ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಿತ್ರ ಮಂಡಳಿಯ ಪ್ರಧಾನ ಅರ್ಚಕ ಸುನಿಲ್‌ ಅಂಚನ್‌ ಇವರು ದೇವರಿಗೆ ಮಂಗಳಾರತಿಗೈಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪುಸ್ತಕ ವಿತರಣೆಯ ದಾನಿಗಳಾಗಿ ಸೋನಿ ಸ್ಟೀಲ್‌ ಆ್ಯಂಡ್‌ ಅಪ್ಲಾಯನ್ಸಸ್‌ ಇದರ ಮಾಲಕ ಪಾಂಡು ಎಲ್‌. ಶೆಟ್ಟಿ, ಪ್ರಕಾಶ್‌ ಆಳ್ವ, ಯಶೋಧರ ಪೂಜಾರಿ, ಸರಳಾ ಪೂಜಾರಿ ಮತ್ತು ಮಂಡಳಿಯ ಸದಸ್ಯರ ಪ್ರಾಯೋಜಕತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎಸ್‌ಎಸ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳಾದ ದಿವ್ಯಾ ಯಶವಂತ್‌ ಕೋಟ್ಯಾನ್‌, ಪ್ರಕಾಶ್‌ ಪ್ರಭಾಕರ ದೇವಾಡಿಗ ಇವರನ್ನು ಸಮ್ಮಾನಿಸಲಾಯಿತು. ಸುಮಾರು 700 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಉಚಿತ ಪುಸ್ತವನ್ನು ವಿತರಿಸಲಾಯಿತು. ಮಂಡಳಿಯ ಅಧ್ಯಕ್ಷರು, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next