Advertisement

Udupi: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ; ಡಿ.18: ಷಷ್ಟಿ ಮಹೋತ್ಸವ ಆಚರಣೆ

10:19 AM Dec 16, 2023 | Team Udayavani |

ಉಡುಪಿ: ಶ್ರೀ ಚಕ್ರಪೀಠ ಸುರಪೂಜಿತೆ ದೊಡ್ಡಣ್ಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ದೇವಯಾನಿ ಸಹಿತ ಷಟ್ ಶಿರ ಸುಬ್ರಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಷಷ್ಟಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ.

Advertisement

ಆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮವಾಗಿ ಪಂಚವಂಶತಿ ಕಲಶಾರಾಧನೆ, ಅವಮಾನ ಸೂಕ್ತ ಕಲಶ ಅಭಿಷೇಕ, ಪಂಚಾಮೃತ ಅಭಿಷೇಕ, ಸುಬ್ರಹ್ಮಣ್ಯ ಸಹಸ್ರನಾಮ ಪಾಯಸ ಹೋಮ, ಬ್ರಾಹ್ಮಣರಾಧನೆ, ಪ್ರಸನ್ನ ಪೂಜೆ, ಮಹಾ ದುರ್ಗಾ ಆದಿಶಕ್ತಿ ಸನ್ನಿಧಾನದ ಬಾಲಸುಬ್ರಮಣ್ಯನ ಸಾನಿಧ್ಯದಲ್ಲಿ ನವಕ ಕಲಶ ಅಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಎರಡು ಸಾನಿಧ್ಯದಲ್ಲಿ ರಂಗ ಪೂಜೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next