Advertisement

ಶ್ರೀ ಆದಿಶಕ್ತಿ ಕನ್ನಡ ಶಾಲೆ: ಶಿಕ್ಷಕಿ ಸುಜಯಾ ಜೈನ್‌ ಬೀಳ್ಕೊಡುಗೆ 

04:33 PM Jul 05, 2018 | Team Udayavani |

ಥಾಣೆ: ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ ನಿರಂತರ ಮೂವತ್ತು ವರ್ಷಗಳಿಂದ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಜಯಾ ಎಲ್‌. ಜೈನ್‌ ಅವರ ಬೀಳ್ಕೊಡುವ ಮತ್ತು ಸಮ್ಮಾನ ಕಾರ್ಯಕ್ರಮವು  ಶಾಲಾ ಸಭಾಂಗಣದಲ್ಲಿ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಅವರು, ಜಗತ್ತಿನಲ್ಲಿಯೇ ಶಿಕ್ಷಕರ ಸ್ಥಾನಮಾನ ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕ ರನ್ನಾಗಿ ರೂಪಿಸುವ ಮಹತ್ವದ ಹೊಣೆ ಗಾರಿಕೆಯನ್ನು ಸುಜಯಾ ಎಲ್‌. ಜೈನ್‌ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ವಿದ್ಯಾರ್ಥಿಗಳ ಏಳ್ಗೆಗಾಗಿ ಮುಡುಪಾಗಿಟ್ಟ ಅವರ ಸೇವೆಯನ್ನು ವಿದ್ಯಾರ್ಥಿಗಳು ಮತ್ತು ಸಂಸ್ಥೆಯು ಮರೆಯಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲೂ ಅವರ ಯೋಗದಾನ ಬಹಳಷ್ಟಿದೆ ಎಂದು ನುಡಿದು ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲೆಯ ಮಾಜಿ ಮುಖ್ಯ ಶಿಕ್ಷಕ, ಸುಜಯಾ ಎಲ್‌. ಜೈನ್‌ ಅವರ ಪತಿ, ಲೋಕನಾಥ ಜೈನ್‌ ಅವರು ಮಾತನಾಡಿ, ಇದೊಂದು ಅಪರೂಪದ ಶಿಕ್ಷಣ ಸಂಸ್ಥೆ. ಮಕ್ಕಳ ಅಭಿವೃದ್ಧಿಯೇ ಮುಖ್ಯ ಧ್ಯೇಯ ಎಂಬುವುದಾಗಿ ಕರ್ತವ್ಯಬದ್ಧವಾಗಿ ತನ್ನ ಶಿಕ್ಷಕ ವೃತ್ತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ತಮಗೆ ಸಹಕರಿಸಿದ ಸಂಘದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಭಾಗ್ಯವಂತರು. ಇದೇ ರೀತಿ ಈ ಶಾಲೆಯು ನೂರ್ಕಾಲ ಪ್ರಸಿದ್ಧಿಯನ್ನು ಪಡೆಯಲಿ. ವಿದ್ಯಾರ್ಥಿ ಗಳು ತಂದೆ-ತಾಯಿಯ ಸೇವೆಗೈಯುವು ದರೊಂದಿಗೆ ಶಾಲೆಯ ಋಣವನ್ನು  ಮರೆಯಬಾರದು ಎಂದರು.

ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ವಾದಿರಾಜ ಶೆಟ್ಟಿ, ಜತೆ ಕಾರ್ಯದರ್ಶಿ ಏಕನಾಥ್‌ ಕುಂದರ್‌ ಇವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಬಿ. ಸ್ವಾಗತಿಸಿದರು. ಪಾಲಕ-ಶಿಕ್ಷಕರ ಸಂಘಟನೆಯ ವತಿಯಿಂದ ಅಶ್ವಿ‌ನಿ ಜವಳಗಿ ಮತ್ತು ರಾಧಿಕಾ ಮಡಪ್‌ಗೊàಲ್‌ ಮಾತನಾಡಿದರು. ಜತೆ ಕಾರ್ಯದರ್ಶಿ ಏಕನಾಥ್‌ ಕುಂದರ್‌,. ಸಂಘದ ಸಲಹೆಗಾರ ಹಾಗೂ ಮಾಜಿ ಅಧ್ಯಕ್ಷ ಜಯರಾಮ್‌ ಜಿ. ಶೆಟ್ಟಿ, ಇನ್ನೋರ್ವ ಮಾಜಿ ಅಧ್ಯಕ್ಷ ಶಿಮಂತೂರು ಶಂಕರ ಶೆಟ್ಟಿ, ಸಂಘದ ಸದಸ್ಯ ಮೇಘರಾಜ್‌, ರಾಮನಾಥ ಐಲ್‌ ಮಾತನಾಡಿ ಶುಭಹಾರೈಸಿದರು. ಶಾಲಾ ಶಿಕ್ಷಕರಾದ ವೆಂಕಟರಮಣ ಶೆಣೈ, ಪ್ರಮೋದಾ ಮಾಡಾ, ಮಮತಾ ಶೆಟ್ಟಿ, ಸಂತೋಷ್‌ ದೊಡ್ಡಮನೆ, ಪ್ರಕಾಶ್‌ ಚಿಂತಾಮಣಿ, ಪುಷ್ಪಾ ಕುಂಬ್ಳೆ, ನಳಿನಿ ಶೆಟ್ಟಿ, ನಿವೃತ್ತ ಶಿಕ್ಷಕ ಶಾಲಿನಿ ಶೆಟ್ಟಿ, ಚಂದ್ರಾವತಿ ಉದ್ಯಾವರ ಇವರು ಸುಜಯಾ ಎಲ್‌. ಜೈನ್‌ ಅವರ ಸಾಧನೆಗಳನ್ನು ವಿವರಿಸಿ ಶುಭಹಾರೈಸಿದರು.

ಹಳೆವಿದ್ಯಾರ್ಥಿಗಳಾದ ಸಂಗೀತಾ ಶೆಟ್ಟಿ, ನಿಶಾ ಪೂಜಾರಿ, ಪಪ್ಪು ರಾಥೋಡ್‌, ಅಖೀಲ ಭಾರತ ಜೈನ ಸಂಘದ ವತಿಯಿಂದ ಸುಪ್ರೀತಾ ಹೆಗ್ಡೆ ಅವರು ಮಾತನಾಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಸುಜಯಾ ಎಲ್‌. ಜೈನ್‌ ಅವರನ್ನು ಶಾಲೆ, ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಜೈನ ಸಂಘ ಹಾಗೂ ಗೋಪಾಲ ಗೌಡ ಅವರ ವತಿಯಿಂದ ಗೌರವಿಸಲಾಯಿತು.

Advertisement

ಸಮ್ಮಾನ ಸ್ವೀಕರಿಸಿ ಮಾತನಾಡಿದ ಸುಜಯಾ ಜೈನ್‌ ಅವರು, ಈ ಶಾಲೆಯಲ್ಲಿ ನಿರಂತರ 30 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲರಿಗೂ ಋಣಿಯಾಗಿದ್ದೇನೆ. ಸಂಘದ ಹಿಂದಿನ ಹಾಗೂ ಪ್ರಸ್ತುತ ಪದಾಧಿಕಾರಿಗಳು ಸಹಕರಿಸಿದ್ದಾರೆ. ಸಹಶಿಕ್ಷಕ -ಶಿಕ್ಷಕಿಯರ ಸಹಕಾರ ವನ್ನು, ಹಳೆವಿದ್ಯಾರ್ಥಿಗಳು, ವಿದ್ಯಾರ್ಥಿಗಳನ್ನು ನಾನು ಜೀವನದಲ್ಲಿ ಮರೆಯುವಂತಿಲ್ಲ ಎಂದರು.

ವಿವಿಧ ಶಿಕ್ಷಕರ ಸಂದೇಶಗಳನ್ನು ಮಮತಾ ಶೆಟ್ಟಿ ಅವರು ವಾಚಿಸಿದರು. ಜೈನ ಸಂಘದ ಪವನಂಜಯ, ಶಿವ ಪ್ರಕಾಶ್‌ ಅವರ ಸಂದೇಶವನ್ನು ವೆಂಕಟರಮಣ ಶೆಣೈ  ವಾಚಿಸಿದರು.  ಮಾಜಿ ಕೋಶಾಧಿಕಾರಿ ಕೇಶವ ಆಳ್ವ, ಜಯರಾಮ್‌ ಕೆ. ಶೆಟ್ಟಿ, ಮನೋಜ್‌ ಹೆಗ್ಡೆ, ಧರ್ಮನಾಥ ಪೂಜಾರಿ, ಅಜಿತ್‌ ಕರ್ನಂತಾಯ, ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಸುಜಯಾ ಎಲ್‌. ಜೈನ್‌ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ್‌ ಚಿಂತಾಮಣಿ ಇವರು ವಂದಿಸಿದರು. ನಳಿನಿ ಶೆಟ್ಟಿ  ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next