Advertisement

ನ್ಯಾಯ ನೀಡುವಂತೆ ಬಿಸಿಸಿಐಗೆ ಶ್ರೀಶಾಂತ್‌ ಪತ್ನಿ ಒತ್ತಾಯ

06:05 AM Nov 30, 2018 | Team Udayavani |

ಕೊಚ್ಚಿ: ಕಳಂಕಿತ ಕ್ರಿಕೆಟಿಗ ಎಸ್‌.ಶ್ರೀಶಾಂತ್‌ ಪತ್ನಿ ಭುವನೇಶ್ವರಿ ದೇವಿ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಗೆ ಪತ್ರ ಬರೆದು ತಮ್ಮ ಪತಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿದ್ದಾರೆ.

Advertisement

“ಶ್ರೀಶಾಂತ್‌ ಯಾವುದೇ ತಪ್ಪನ್ನು ಮಾಡಿಲ್ಲ. ನ್ಯಾಯಲಯ ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ಬಿಸಿಸಿಐ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಹಾಗಿದ್ದರೆ ಮುದ್ಗಲ್‌ ಸಮಿತಿ ಸೂಚಿಸಿದ 13 ಆಟಗಾರರ ವಿರುದ್ಧ ಇನ್ನೂ ಏಕೆ ಶಿಸ್ತಿನ ಕ್ರಮ ತೆಗೆದುಕೊಂಡಿಲ್ಲ. ಶ್ರೀಶಾಂತ್‌ಗೆ ಮಾತ್ರ ಕಠಿಣ ಶಿಕ್ಷೆ ಏಕೆ? ನನ್ನ ಮನವಿಯನ್ನು ಪುರಸ್ಕರಿಸಿದ ಶ್ರೀಶಾಂತ್‌ಗೆ ಬಿಸಿಸಿಐ ಮರುಜನ್ಮ ನೀಡುತ್ತದೆ ಎಂದು ಭಾವಿಸಿದ್ದೇನೆ ಎಂದು ಭುವನೇಶ್ವರಿ ಪತ್ರದಲ್ಲಿ ತಿಳಿಸಿದ್ದಾರೆ.

2013ರಲ್ಲಿ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಶ್ರೀಶಾಂತ್‌ ಸಿಕ್ಕಿ ಹಾಕಿಕೊಂಡು ಆಜೀವ ನಿಷೇಧಕ್ಕೆ ಒಳಗಾಗಿದ್ದರು. 2015ರಲ್ಲಿ ದಿಲ್ಲಿ ನ್ಯಾಯಾಲಯ ಶ್ರೀಶಾಂತ್‌ ನಿರಪರಾಧಿ ಎಂದು ತೀರ್ಪು ನೀಡಿತ್ತು. ಹೀಗಿದ್ದರೂ ಬಿಸಿಸಿಐ ಮಾತ್ರ ಶ್ರೀಶಾಂತ್‌ ಮೇಲಿನ ಆಜೀವ ನಿಷೇಧ ಸಡಿಲಗೊಳಿಸಿರಲಿಲ್ಲ. ಇದರಿಂದ ಶ್ರೀಶಾಂತ್‌ ಸಾಕಷ್ಟು ನೊಂದಿದ್ದರು. ಬಿಗ್‌ಬಾಸ್‌ 12ನೇ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಶ್ರೀಶಾಂತ್‌ ತಮ್ಮ ಬದುಕಿನ ಕರಾಳ ದಿನವನ್ನು ನೆನೆದು ಕಣ್ಣೀರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next