Advertisement

ಸ್ಯಾಂಡಲ್ ವುಡ್ ನತ್ತ ಶ್ರೀಶಾಂತ್ ಚಿತ್ತ

12:05 AM Aug 02, 2019 | Team Udayavani |

ಒಂದು ಕಾಲದಲ್ಲಿ ಕ್ರಿಕೆಟ್‌ ಮೈದಾನದಲ್ಲಿ ತನ್ನ ಅಮೋಘ ಆಟದ ಮೂಲಕ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದ್ದ ಮಾಜಿ ಕ್ರಿಕೆಟಿಗ ಶ್ರೀಶಾಂತ್‌ ನಂತರ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ಮೇಲೆ ಬೆಳ್ಳಿತೆರೆಯತ್ತ ಮುಖ ಮಾಡಿದ್ದು ಗೊತ್ತೇ ಇದೆ. ಹಿಂದಿ ಮತ್ತು ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಶ್ರೀಶಾಂತ್‌, ಬಳಿಕ ನಿಧಾನವಾಗಿ ಕನ್ನಡ ಚಿತ್ರರಂಗದತ್ತಲೂ ಚಿತ್ತ ಹರಿಸುತ್ತಿದ್ದಾರೆ. ಹೌದು, ಸದ್ಯ ಶ್ರೀಶಾಂತ್‌ “ಕೆಂಪೇಗೌಡ-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ಪರಿಚಯವಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಶಾಂತ್‌ ಅಭಿನಯಿಸುತ್ತಿರುವ “ಧೂಮ್‌ ಅಗೇನ್‌’ ಎನ್ನುವ ಮತ್ತೂಂದು ಚಿತ್ರ ಕೂಡ ಅನೌನ್ಸ್‌ ಆಗಿದೆ.

Advertisement

“ಕೆಂಪೇಗೌಡ-2′ ಚಿತ್ರದ ಬಳಿಕ ಶ್ರೀಶಾಂತ್‌ “ಧೂಮ್‌ ಅಗೇನ್‌’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಶ್ರೀಶಾಂತ್‌ ಸ್ಪೆಷಲ್‌ ಪೊಲೀಸ್‌ ಆಫೀಸರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ಮತ್ತು ಟೀಸರ್‌ ಅದ್ಧೂರಿಯಾಗಿ ಹೊರಬಂದಿದ್ದು, ಚಿತ್ರದಲ್ಲಿ ಶ್ರೀಶಾಂತ್‌ ಗೆಟಪ್‌ ಗಮನ ಸೆಳೆಯುತ್ತಿದ್ದು, ಶ್ರೀಶಾಂತ್‌ ಕೂಡ ಮುಂಬರುವ ತಮ್ಮ ಚಿತ್ರಗಳ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.

“ಸದ್ಯ ನನ್ನ ಗಮನ ಚಿತ್ರರಂಗದತ್ತ ಕಡೆಗೆ ಇರುವುದರಿಂದ, ಇಲ್ಲಿಯೇ ಹೊಸ ಹೊಸ ಅವಕಾಶಗಳನ್ನು ಹುಡುಕುತ್ತೇನೆ. ಈಗ ಕಲಾವಿದನಾಗಿರುವುದರಿಂದ ಹೊಸ ಥರದ ಪಾತ್ರಗಳಿಗೆ, ಪ್ರಯೋಗಗಳಿಗೆ ನನ್ನನ್ನು ತೆರೆದುಕೊಳ್ಳಲು ಬಯಸುತ್ತೇನೆ. ಈ ಬಗ್ಗೆ ನನಗೆ ಖುಷಿ ಇದೆ. ಮೊದಲು “ಕೆಂಪೇಗೌಡ-2′ ಚಿತ್ರದಲ್ಲೂ ಒಳ್ಳೆಯ ಪಾತ್ರ ಸಿಕ್ಕಿತ್ತು. ಈಗ “ಧೂಮ್‌ ಅಗೇನ್‌’ ಚಿತ್ರದಲ್ಲೂ ಅಂಥದ್ದೇ ಮತ್ತೂಂದು ಒಳ್ಳೆಯ ಪಾತ್ರ ಸಿಕ್ಕಿದೆ’ ಎನ್ನುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿರುವುದರ ಬಗ್ಗೆ ಮಾತನಾಡುವ ಶ್ರೀಶಾಂತ್‌, “ಕನ್ನಡ ಚಿತ್ರರಂಗ ಸಾಕಷ್ಟು ಬೆಳೆದಿದೆ. ಪ್ರತಿವರ್ಷ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೊಸಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹೊಸಥರದ ಚಿತ್ರಗಳು ಬರುತ್ತಿವೆ. ಅದರಲ್ಲೂ ಹೊಸಬರ ಚಿತ್ರಗಳನ್ನು ಇಲ್ಲಿನ ಆಡಿಯನ್ಸ್‌ ಹೆಚ್ಚು ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾಗಿಯೇ ನನ್ನ ಥರದ ಹೊಸಬರು ಕೂಡ ಇಲ್ಲಿಗೆ ಬರೋದಕ್ಕೆ ಸಾಧ್ಯವಾಗುತ್ತಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದಾಗ ಇಲ್ಲಿನ ಚಿತ್ರರಂಗದಲ್ಲಿ ಎಲ್ಲರೂ ತುಂಬಾ ಸಪೋರ್ಟ್‌ ನೀಡಿದ್ರು. ಹಾಗಾಗಿಯೇ ತುಂಬಾ ಸುಲಭವಾಗಿ “ಕೆಂಪೇಗೌಡ-2′ ಚಿತ್ರ ಮಾಡೋದಕ್ಕೆ ಸಾಧ್ಯವಾಯ್ತು. ಈಗ ಕನ್ನಡದಲ್ಲಿ ಮತ್ತೂಂದು ಚಿತ್ರ ಮಾಡುವ ಅವಕಾಶ ಬಂದಿದೆ. ಅವಕಾಶ ಸಿಕ್ಕರೆ ಮುಂದೆಯೂ ಇಲ್ಲಿ ಚಿತ್ರಗಳನ್ನು ಖಂಡಿತಾ ಮಾಡುತ್ತೇನೆ. ಒಳ್ಳೆಯ ಚಿತ್ರಗಳನ್ನು ಮಾಡಿದ್ರೆ ಆಡಿಯನ್ಸ್‌ ಖಂಡಿತಾ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.

ಮತ್ತೂಂದೆಡೆ, ಈಗಾಗಲೇ “ಕೆಂಪೇಗೌಡ-2′ ಚಿತ್ರ ಟೀಸರ್‌, ಟ್ರೇಲರ್‌ ಬಿಡುಗಡೆಯಾಗಿದ್ದು, “ಕೆಂಪೇಗೌಡ-2′ ನಲ್ಲಿ ಶ್ರೀಶಾಂತ್‌ ಖದರ್‌ ಜೋರಾಗಿಯೇ ಕಾಣುತ್ತಿದೆ. ಇನ್ನು ಶ್ರೀಶಾಂತ್‌ ಅವರಿಗೂ “ಕೆಂಪೇಗೌಡ-2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು, ಕೋಮಲ್‌ ಮತ್ತು ಶ್ರೀಶಾಂತ್‌ ಜುಗಲ್‌ಬಂದಿ ಎಷ್ಟರ ಮಟ್ಟಿಗೆ ವರ್ಕೌಟ್‌ ಆಗಲಿದೆ ಅನ್ನೋದು ಇದೇ ಆಗಸ್ಟ್‌ 9ರಂದು ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next