Advertisement

ಶ್ರೀಧರ ದೀಕ್ಷಿತ್‌ ಸನ್ಯಾಸ ಸ್ವೀಕಾರ ನಾಳೆ

06:20 AM Jan 27, 2018 | |

ಸಾಗರ: ತಾಲೂಕಿನ ತ್ಯಾಗರ್ತಿಯ ಸಚ್ಚಿದಾನಂದ ಆಶ್ರಮ ಸತ್ಯಪೀಠದ ಶ್ರೀಧರ ದೀಕ್ಷಿತ್‌ ಸ್ವಾಮೀಜಿಗಳು ಭಾನುವಾರ
(ಜ.28) ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ಸನ್ಯಾಸ ಸ್ವೀಕಾರ ಮಾಡಲಿದ್ದಾರೆ. 

Advertisement

ಕೂಡಲಿ ಶೃಂಗೇರಿಯ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮತ್ತೂರಿನ ವಿಶ್ವಾಸಾನಂದ ತೀರ್ಥರು ಸನ್ಯಾಸ ದೀಕ್ಷೆ ಉಪದೇಶ ನೀಡಲಿದ್ದಾರೆ. ಮತ್ತೂರಿನ ವೇದಬ್ರಹ್ಮ ಮಾರ್ಕಾಂಡೇಯ ಅವಧಾನಿಗಳ ನಡೆಯಲಿದ್ದು, ಪೂರ್ವಭಾವಿಯಾಗಿ ಗುರುವಾರದಿಂದಲೇ ಕಾರ್ಯಕ್ರಮಗಳು ಆರಂಭವಾಗಿವೆ. ಸಾಗರದ ವೆಂಕಟೇಶ್‌ ದೀಕ್ಷಿತ್‌ ಹಾಗೂ ರಮಾಬಾಯಿಯವರ ಮಗನಾಗಿ 1951ರಲ್ಲಿ ಜನಿಸಿದ ಶ್ರೀಧರ ದೀಕ್ಷಿತ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಾಗರದಲ್ಲೇ ಮುಗಿಸಿದರು. ನಂತರ ಬೆಂಗಳೂರಿನಲ್ಲಿ ಲೈಬ್ರರಿ ತರಬೇತಿ ಪಡೆದು ನಗರದ ಲಾಲ್‌ಬಹದ್ದೂರ್‌ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ 26 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಆಧ್ಯಾತ್ಮಿಕ ಸೆಲೆಯಿಂದ ಪ್ರೇರೇಪಣೆಯಾಗಿ ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಹೊಂದಿ ಬಳ್ಳಾರಿಯ ಸಿಂಹಾದ್ರಿ ಸ್ವಾಮಿಗಳಿಂದ ಪಂಚೀಕರಣ ಶಾಸ್ತ್ರದ ಕುರಿತು ಅನುಗ್ರಹಿತರಾದರು.

2002ರಲ್ಲಿ ತ್ಯಾಗರ್ತಿಯ ದೇವಸ್ಥಾನವೊಂದರಲ್ಲಿ ಒಂದು ವರ್ಷ ತಪಸ್ಸನ್ನು ನಡೆಸಿದ ನಂತರ ಅಲ್ಲಿಯೇ ಸಮೀಪದಲ್ಲಿ
ಆಶ್ರಮ ನಿರ್ಮಿಸಿಕೊಂಡು ಭಕ್ತರಿಗೆ ಆಧ್ಯಾತ್ಮದ ಕುರಿತಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next