Advertisement

ಸಾ.ರಾ.ಮಹೇಶ್‌ ಜತೆ ರಾಜಿಗೆ ಮುಂದಾದ ಎಚ್‌.ವಿಶ್ವನಾಥ್‌

10:57 PM Sep 24, 2019 | Team Udayavani |

ಮೈಸೂರು: ಕಳೆದ ಹಲವು ದಿನಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಇದೀಗ ಮಾಜಿ ಸಚಿವ ಸಾ.ರಾ.ಮಹೇಶ್‌ ಅವರೊಂದಿಗೆ ರಾಜಿಗೆ ಮುಂದಾಗಿದ್ದಾರೆ. “ಇಬ್ಬರೂ ತಪ್ಪುಮಾಡಿ ಗಾಜಿನ ಮನೆಯಲ್ಲಿದ್ದೇವೆ, ಇಲ್ಲಿಗೆ ಸಾಕು. ವೈಯಕ್ತಿಕ ವಿಚಾರಗಳ ಕುರಿತು ಟೀಕೆ ಮಾಡುವುದನ್ನು ನಿಲ್ಲಿಸೋಣ’ ಎನ್ನುವ ಮೂಲಕ ವಿಶ್ವನಾಥ್‌ ಬಹಿರಂಗ ಜಗಳಕ್ಕೆ ಇತಿಶ್ರೀ ಹೇಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ನಾವಿಬ್ಬರೂ ಒಂದೇ ಊರಿನವರು, ಪರಸ್ಪರ ಈ ರೀತಿ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವುದು ಸರಿಯಲ್ಲ. ಜನರು ನಮ್ಮನ್ನು ಗಮನಿಸುತ್ತಿದ್ದಾರೆ, ಅವರ ಮುಂದೆ ಜಾರಿ ಬೀಳುವುದು ಬೇಡ. ನೀವೇನೋ ಮಾಡಿಬಿಡುತ್ತೀರಿ ಎಂದು ಹೆದರಿ ಈ ಮಾತುಗಳನ್ನು ಹೇಳುತ್ತಿಲ್ಲ. ನನ್ನದು ನಿವೃತ್ತಿಯ ರಾಜಕಾರಣ, ನೀವು ಬೆಳೆಯಬೇಕಿರುವ ರಾಜಕಾರಣಿ.

ಆದ್ದರಿಂದ ಪರಸ್ಪರ ವೈಯಕ್ತಿಕ ಟೀಕೆಗಳು ಬೇಡ ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ ಎಂಬುದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಪರಸ್ಪರ ಮಾಡುತ್ತಿರುವ ಟೀಕೆಗಳಿಂದ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next