Advertisement
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಜ.1ರಿಂದಲೇ ಅಕ್ಷತೆ ಹಂಚುವ, ಕರಪತ್ರಗಳನ್ನು ವಿತರಿಸುವ, ಮನೆ-ಮನೆಗಳಿಗೆ ಭೇಟಿ ನೀಡಿ ಮಂದಿರದ ವೈಭವದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಮಂದಿ ಉದ್ಘಾಟನೆಯಂದು ಮನೆಯಲ್ಲಿ ದೀಪ ಬೆಳಗಿಸಿ ಎಂದು ಜನರಿಗೆ ತಿಳಿಸಿ, ಮನವರಿಕೆ ಮಾಡಲು ಅಮಿತ್ ಶಾ ಸಲಹೆ ಮಾಡಿದ್ದಾರೆ.
Related Articles
ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆಂದು ಸೀತಾ ದೇವಿಯ ಜನ್ಮಭೂಮಿ ಎನ್ನಲಾಗುವ ನೇಪಾಳದಿಂದ ಅಯೋಧ್ಯೆಗೆ ವಿಶಿಷ್ಟ ಸ್ಮರಣಿಕೆಗಳನ್ನು ಕಳುಹಿಸಲಾಗುತ್ತಿದೆ. ಜ.18ರಂದು ಜಾನಕಪುರಧಾಮ್- ಅಯೋಧ್ಯಾಪುರಧಾಮ್ ಎಂಬ ಹೆಸರಿನ ಯಾತ್ರೆಯನ್ನು ನೇಪಾಳದಿಂದ ಆರಂಭಿಸಲಾಗುತ್ತಿದ್ದು, ಜ.20ರಂದು ಈ ಪ್ರಯಾಣ ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ. ರಾಮನಿಗಾಗಿ ವಿವಿಧ ಆಭರಣ, ವಸ್ತ್ರಗಳು, ಪಾತ್ರೆ ಮತ್ತು ಸಿಹಿ ತಿಂಡಿಗಳನ್ನು ಸ್ಮರಣಿಕೆಯಾಗಿ ಕಳುಹಿಸಲಾಗುತ್ತಿದೆ ಎಂದು ಜಾನಕಿ ದೇಗುಲದ ಮಹಂತರಾದ ರಾಮ್ರೋಶನ್ ದಾಸ್ ವೈಷ್ಣವ್ ಹೇಳಿದ್ದಾರೆ.
Advertisement