Advertisement

ವಿವೇಕಾನಂದ ಸ್ಮರಣಾರ್ಥ ಬಜ್‌ಬಜ್‌ನಿಂದ ಸೀಲ್ಡಾಗೆ ವಿಶೇಷ ರೈಲು

03:30 PM Feb 13, 2018 | Team Udayavani |

ಕೋಲ್ಕತ : ಸ್ವಾಮಿ ವಿವೇಕಾನಂದರು ಶಿಕಾಗೋದಿಂದ ಮರಳಿದ 122ನೇ ವಾರ್ಷಿಕ ದಿನವಾದ ಇದೇ ಫೆ.19ರಂದು ಪೂರ್ವ ರೈಲ್ವೇ, ಬಜ್‌ ಬಜ್‌ ನಿಂದ ಸೀಲ್ಡಾಗೆ ವಿಶೇಷ ರೈಲು ಓಡಿಸಲಿದೆ. ಸ್ವಾಮಿ ವಿವೇಕಾನಂದರು  ಶಿಕಾಗೋದಲ್ಲಿ ಐತಿಹಾಸಿ ಭಾಷಣವನ್ನು ಮಾಡಿದ್ದರು. 

Advertisement

ಅಮೆರಿಕದ ಶಿಕಾಗೋದಿಂದ 1897ರಲ್ಲಿ ಮರಳಿದ್ದ ಸ್ವಾಮಿ ವಿವೇಕಾನಂದರು ಅಂದಿನ ಮದ್ರಾಸ್‌ (ಇಂದಿನ ಚೆನ್ನೈ)ಗೆ ಸ್ಟೀಮರ್‌ ಮೂಲಕ ಪ್ರಯಾಣಿಸಿದ್ದು ಅದು ಕೋಲ್ಕತಾದಿಂದ 25 ಕಿ.ಮೀ. ದೂರವಿರುವ ಹೂಗ್ಲಿ ನದೀ ದಂಡೆಯ ಬಜ್‌ಬಜ್‌ನಲ್ಲಿ ಲಂಗರು ಹಾಕಿತ್ತು. 

ಸ್ವಾಮಿ ವಿವೇಕಾನಂದ ಅವರು ದಕ್ಷಿಣ 24 ಪರಗಣ ಜಿಲ್ಲೆಯ ಬಜ್‌ ಬಜ್‌ನಿಂದ  ಕೋಲ್ಕತಾಗೆ 1897ರ ಫೆ.19ರಂದು ರೈಲಿನಲ್ಲಿ ಪ್ರಯಾಣಿಸಿದ್ದರು. ರೈಲು ನಿಲ್ದಾಣದಲ್ಲಿ ಅವರಿಗೆ ಅತ್ಯಂತ ವೀರೋಚಿತ ಸ್ವಾಗತವನ್ನು ನೀಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next