Advertisement

ಹಿ.ಪ್ರ.ಸ್ಪಿತಿ ಹಾಫ್‌ ಮ್ಯಾರಥಾನ್‌:ಶಿವಾನಂದ ಶೆಟ್ಟಿಗೆ 7ನೇ ಸ್ಥಾನ

12:13 PM Jun 29, 2018 | Team Udayavani |

ಮುಂಬಯಿ:ಹಿಮಾಚಲ ಪ್ರದೇಶದ ಖಾಜ್ಹಾ ಸ್ಪಿಡಿ ವ್ಯಾಲಿಯಲ್ಲಿ ರಾಯನ್‌ ಸಾಮಾಜಿಕ ಸಂಸ್ಥಾನದ ವತಿಯಿಂದ ಜೂ. 24 ರಂದು ನಡೆದ ರಾಷ್ಟ್ರ ಮಟ್ಟದ 21 ಮೀಟರ್‌ಗಳ ಸ್ಪಿತಿ ಹಾಫ್‌ ಮ್ಯಾರಥಾನ್‌ನಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಇವರು ಏಳನೇ ಸ್ಥಾನವನ್ನು ಗಳಿಸಿದ್ದಾರೆ.

Advertisement

ಸಮುದ್ರ ಮಟ್ಟದಿಂದ  12 ಸಾವಿರ ಅಡಿ ಎತ್ತರದ ಸ್ಪಿತಿಯಲ್ಲಿ ಈ ಮ್ಯಾರಾಥಾನ್‌ ನಡೆದಿದ್ದು, ದೇಶಾದ್ಯಂತದ 18 ವರ್ಷದಿಂದ 90 ವರ್ಷದವರೆಗಿನ ಓಪನ್‌ ಕ್ಯಾಟಗರಿಯಲ್ಲಿ 276 ಮಂದಿ ಭಾಗವಹಿಸಿದ್ದರು. ಉಸಿರಾಡಲು ಆಮ್ಲಜನಕವೇ ಇಲ್ಲದ ಈ ಪ್ರದೇಶದಲ್ಲಿ 21 ಮೀಟರ್‌ಗಳನ್ನು ಶಿವಾನಂದ ಶೆಟ್ಟಿ ಅವರು 2 ಗಂಟೆ 1 ನಿಮಿಷ 1 ಸೆಕೆಂಡ್‌ನ‌ಲ್ಲಿ ಕ್ರಮಿಸಿ ವಿಶೇಷ ಸಾಧನೆಗೈದಿದ್ದಾರೆ. ಶಿವಾನಂದ ಶೆಟ್ಟಿ ಅವರನ್ನು ಹಿಮಾಚಲ ಪ್ರದೇಶದ ಕೃಷಿ ಸಚಿವ ಸಕ್ಲೇಜಿಂಗ್‌ ದೂಜೇì ಅವರು ಅಭಿನಂದಿಸಿದರು.

ಚರ್ಚ್‌ಗೇಟ್‌ನ ಯುನಿವರ್ಸಿಟಿ ಮೈದಾನದಲ್ಲಿ ಜೂ. 16 ರಂದು ಎನ್‌ಇಬಿ ನ್ಪೋರ್ಟ್ಸ್ ಸಂಸ್ಥೆಯವರು ಆಯೋಜಿಸಿದ್ದ ಮೂರನೇ ವಾರ್ಷಿಕ 24 ಗಂಟೆಗಳ ಸ್ಟೇಡಿಯಂ ರನ್‌ನಲ್ಲಿ 12 ಗಂಟೆಗಳಲ್ಲಿ 87 ಕಿ. ಮೀ. ನ್ನು ಕ್ರಮಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಯುನಿವರ್ಸಿಟಿ ಮೈದಾನದಲ್ಲಿ ಇವರು 219 ರೌಂಡ್‌ನ್ನು ಇವರು ಪೂರೈಸಿದ್ದರು. ರಾಷ್ಟ್ರ, ಅಂತಾರಾಷ್ಟಿÅàಯ ಮಟ್ಟದ ಮ್ಯಾರಥಾನ್‌ಪಟುವಾಗಿರುವ ಇವರು, ಹಲವಾರು ಮ್ಯಾರಥಾನ್‌, ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ನೂರಕ್ಕೂ ಅಧಿಕ ಪದಕಗಳನ್ನು ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next