Advertisement

ಅಮೂಲ್ಯ ಮನೆ ಮೇಲೆ ಕಲ್ಲು ತೂರಾಟ

11:51 PM Feb 21, 2020 | Lakshmi GovindaRaj |

ಕೊಪ್ಪ: ಅಮೂಲ್ಯ ಲಿಯೋನಾಳ ಗುಬ್ಬಗದ್ದೆಯಲ್ಲಿರುವ ಮನೆ ಮೇಲೆ ಕಲ್ಲು ತೂರಲಾಗಿದ್ದು, ಕಿಟಕಿಯ ಗಾಜುಗಳೆಲ್ಲ ಪುಡಿ,ಪುಡಿಯಾಗಿವೆ. ಈ ಬಗ್ಗೆ ಅಮೂಲ್ಯ ತಂದೆ ಓಸ್ವಲ್ಡ್‌ ನರೋನಾ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಗುರುವಾರ ಸಂಜೆ 7.30ರ ಸುಮಾರಿಗೆ ಭಜರಂಗದಳ ತಾಲೂಕು ಸಂಚಾಲಕ ರಾಕೇಶ್‌ ಹಿರೇಕೊಡಿಗೆ, ಅಚ್ಚು ಶಿವಪುರ, ಬಿಜೆಪಿ ಮುಖಂಡರಾದ ನಾರ್ವೆ ಅನೂಪ್‌, ಕಿರಣ್‌ ಎಂಬುವರು ಅಮೂಲ್ಯ ಮನೆಗೆ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಆಕೆ ಇಲ್ಲಿಗೆ ಬಂದರೆ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ನಂತರ, ರಾತ್ರಿ 8.45ರ ಸುಮಾರಿಗೆ ರಾಕೇಶ್‌ ಹಿರೇಕೊಡಿಗೆ, ಸಂಪತ್‌, ಶರತ್‌ ಕಾರಂಗಿ ಎಂಬುವರು ಮತ್ತೆ ಮನೆಯ ಬಳಿ ಬಂದು ಕಲ್ಲು, ಇಟ್ಟಿಗೆ ತುಂಡುಗಳನ್ನೆಲ್ಲ ಎಸೆದು ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗುಬ್ಬಗದ್ದೆಯ ಅಮೂಲ್ಯ ಮನೆಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಎಸ್‌ಪಿ ಶೃತಿ ಶುಕ್ರವಾರ ಅವರ ಮನೆಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next