Advertisement

ಸ್ಕೂಟಿಗೆ ಟ್ರಕ್‌ ಢಿಕ್ಕಿ: ಅಜ್ಜ ಸಾವು, 6 ರ ಬಾಲಕನನ್ನು 2 ಕಿ.ಮೀ ಎಳೆದೊಯ್ದ ಚಾಲಕ

02:30 PM Feb 26, 2023 | Team Udayavani |

ಲಕ್ನೋ:  ಟ್ರಕ್‌ ವೊಂದು ಸ್ಕೂಟಿಗೆ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಹೋಬಾದ ಕಾನ್ಪುರ-ಸಾಗರ್ ರಾ. ಹೆದ್ದಾರಿ 86 ರಲ್ಲಿ ನಡೆದಿದೆ.

Advertisement

ಸ್ಕೂಟಿಯಲ್ಲಿ ಮಾರುಕಟ್ಟೆಗೆ ಅಜ್ಜ ಉದಿತ್ ನಾರಾಯಣ್ ಚಾನ್ಸೋರಿಯಾ (67) ತನ್ನ  6 ವರ್ಷದ ಮೊಮ್ಮಗ ಸಾತ್ವಿಕ್ ಅವರನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಟ್ರಕ್‌ ವೊಂದು ವೇಗವಾಗಿ ಬಂದು ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಹಿರಿಯ ಜೀವ ಉದಿತ್‌ ನಾರಾಯಣ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಗು ಹೆತ್ತ ಬಳಿಕ ಕೈ, ಕಾಲುಗಳನ್ನೇ ಕಳೆದುಕೊಂಡ ಮಹಿಳೆ: ಏನಿದು ಸೆಪ್ಟಿಕ್‌ ಶಾಕ್?

ಅಪಘಾತ ತೀವ್ರತೆಗೆ ಸ್ಕೂಟಿ ಟ್ರಕ್‌ ನಡಿಯಲ್ಲೇ ಸಿಲುಕಿಗೊಂಡಿದ್ದು, ಅದರಲ್ಲಿ ಪುಟ್ಟ ಬಾಲಕ ಸಾತ್ವಿಕ್‌ ಸಿಕ್ಕಾಕಿಕೊಂಡಿದ್ದಾನೆ.  ಇಷ್ಟೆಲ್ಲಾ ಆದರೂ ಟ್ರಕ್‌ ಚಾಲಕ ಮಾತ್ರ ಇದನ್ನು ನಿರ್ಲಕ್ಷಿಸಿ ಸ್ಕೂಟಿ ಸಹಿತ ಬಾಲಕನನ್ನು 2 ಕಿ.ಮೀ ಎಳೆದೊಯ್ದಿದ್ದಾನೆ. ಪರಿಣಾಮ ಬಾಲಕ ಕೂಡ ಮೃತಪಟ್ಟಿದ್ದಾನೆ.

ಅಕ್ಕಪಕ್ಕ ಹೋಗುತ್ತಿದ್ದ ಸವಾರರು ಎಷ್ಟು ಹೇಳಿದರೂ ಟ್ರಕ್‌ ನಿಲ್ಲಿಸದೆ ಚಾಲಕ ಹೋಗಿದ್ದಾನೆ. ರಸ್ತೆಯಲ್ಲಿ ಕಲ್ಲುಗಳನ್ನು ಇಟ್ಟು ಟ್ರಕ್‌ ನ್ನು ನಿಲ್ಲಿಸಿದ್ದಾರೆ. ಸದ್ಯ ಟ್ರಕ್‌ ಚಾಲಕನನ್ನು ಸ್ಥಳೀಯರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಟ್ರಕ್‌ ಜಪ್ತಿ ಮಾಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next