Advertisement

ಕೋವಿಡ್ ನಾಶಕ್ಕಾಗಿ ಮೃತ್ಯುಂಜಯ ಹವನ

06:43 AM May 31, 2020 | Suhan S |

ಬಂಕಾಪುರ: ಬಿಸನಳ್ಳಿ ಕಾಶಿ ಮಠದ ವೇದ, ಸಂಸ್ಕೃತ ಪಾಠಶಾಲೆಯಲ್ಲಿ ವಿಶ್ವಾದ್ಯಂತ ವ್ಯಾಪಿಸಿರುವ ಕೋವಿಡ್ ಹೋಗಲಾಡಿಸಲು ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾರ್ಗದರ್ಶನದಲ್ಲಿ ವಟುಗಳಿಂದ ಚಾಲನೆಗೋಂಡ ಮೃತ್ಯುಂಜಯ ಜಪಪಠನೆಯೊಂದಿಗೆ ಸಮಾರೋಪಗೊಂಡಿತು.

Advertisement

ಪಾಠಶಾಲೆ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಶಾಸ್ತ್ರೀಗಳು ಮಾತನಾಡಿ, ವಿಶ್ವಾದ್ಯಂತ ವ್ಯಾಪಿಸಿರುವ ಕೋವಿಡ್ ವೈರಸ್‌ ಹೋಗಲಾಡಿಸುವ ಉದ್ದೇಶದಿಂದ, ವಿಶ್ವಶಾಂತಿ, ಲೋಕ ಕಲ್ಯಾಣಕ್ಕಾಗಿ 1.25 ಲಕ್ಷ ಮೃತ್ಯುಂಜಯ ಜಪ ಮಾಡಲಾಯಿತು. ಎರಡು ತಿಂಗಳಿನಿಂದ ಕೊರೊನಾ ಮಹಾಮಾರಿ ದೇಶದ್ಯಾಂತ ವ್ಯಾಪಿಸಿದ್ದು, ಅದನ್ನು ತಡೆಗಟ್ಟಲು ಕಾಶಿ ಶ್ರೀಗಳ ಆದೇಶದ ಮೇರೆಗೆ ಪಾಠಶಾಲೆ ಆವರಣದಲ್ಲಿ ವಿವಿದ ಪೂಜಾ ಕೈಂಕರ್ಯ ನಡೆಸಲಾಯಿತು ಎಂದು ಹೇಳಿದರು.

ಮಠದ ಮುಖ್ಯ ವ್ಯವಸ್ಥಾಪಕ ಗುರುಶಾಂತಪ್ಪ ನರೇಗಲ್‌, ವೀರಭದ್ರಗೌಡ ಆಜೂರ, ಉಮೇಶ ಅಂಗಡಿ, ಮುರಗೇಶ ಆಜೂರ, ಗದಿಗೇಪ್ಪ ಮಾ.ಪ. ಶೆಟ್ಟರ, ಸೋಮಶೇಖರ ಆಜೂರ, ಪಾಠಶಾಲೆ ವಟುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next